Connect with us

    LATEST NEWS

    ಕಾರ್ಕಳ:ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕ ನಾಪತ್ತೆ..!

    ಉಡುಪಿ ಜಿಲ್ಲೆಯ  ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪೆರ್ವಾಜೆ ಪೊತ್ತೊಂಜಿಕಟ್ಟೆ ಗುಂಡ್ಯಾ ಮನೆ ನಿವಾಸಿ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕನೋರ್ವ ನಾಪತ್ತೆ ಯಾಗಿದ್ದಾನೆ .

    ಕಾರ್ಕಳ : ಉಡುಪಿ ಜಿಲ್ಲೆಯ  ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪೆರ್ವಾಜೆ ಪೊತ್ತೊಂಜಿಕಟ್ಟೆ ಗುಂಡ್ಯಾ ಮನೆ ನಿವಾಸಿ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕನೋರ್ವ ನಾಪತ್ತೆ ಯಾಗಿದ್ದಾನೆ .

    ಪ್ರಸಾದ (25) ನಾಪತ್ತೆಯಾಗಿರುವ ಯುವಕನಾಗಿದ್ದಾನೆ .

    ಈತ ಸುಮಾರು 4 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ರಾತ್ರಿ ಮಲಗಿಕೊಂಡಿದ್ದ ಯುವಕ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಕಾಣೆಯಾಗಿದ್ದ,

    ಪ್ರಸಾದ ಮನೆಯಲ್ಲಿ ಇಲ್ಲದೇ ಇರುವುದನ್ನು ಕಂಡ ಮನೆಯವರು ನೆರೆಹೊರೆಯಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಪತ್ತೆಯಾಗದ ಹಿನ್ನೆಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿರುತ್ತಾರೆ.

    ಸುಮಾರು 5 ಅಡಿ 7 ಇಂಚು ಎತ್ತರ ಗೋಧಿ ಮೈಬಣ್ಣ , ಆಕಾಶ ನೀಲಿ ಬಣ್ಣದ ಶರ್ಟ್‌, ಕಪ್ಪು ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿರುತ್ತಾರೆ. ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾನೆ.

    ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply