Connect with us

LATEST NEWS

ಕಾರ್ಕಳ – ಗಂಡ ಹೆಂಡತಿ ನಡುವೆ ಗಲಾಟೆ…ಹೊಂಡಕ್ಕೆ ಹಾರಿದ್ದ ಪತ್ನಿ; ರಕ್ಷಿಸಲು ಹೋದ ಪತಿಯೂ ಸಾವು, ಅನಾಥರಾದ ಮಕ್ಕಳು!

ಉಡುಪಿ ಜೂನ್ 25: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನುತ್ತಾರೆ, ಆದರೆ ಇಲ್ಲಿ ನಡೆದ ಸಣ್ಣ ಜಗಳ ಇಬ್ಬರ ಜೀವವನ್ನು ಬಲಿತೆಗೆದುಕೊಂಡಿದ್ದು, ಇಬ್ಬರು ಮಕ್ಕಳನ್ನು ತಬ್ಬಲಿ ಮಾಡಿದೆ.


ಟಿವಿ ಮಾರಾಟದ ವಿಚಾರದಲ್ಲಿ ಜಗಳ ಉಂಟಾಗಿದ್ದು ಇದರಿಂದ ನೊಂದ ಪತ್ನಿ ನೀರು ತುಂಬಿದ್ದ ಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಈ ವೇಳೆ ಆಕೆಯ ರಕ್ಷಣೆಗೆ ಮುಂದಾದ ಆಕೆಯ ಪತಿಯೂ ಕೂಡಾ ಅದೇ ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ತೋಟದಲ್ಲಿ ನಡೆದಿದೆ. ಮೃತರನ್ನು ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋಧಾ (32) ಎಂಬವರು ಆತ್ಮಹತ್ಯೆಗೈದ ದಂಪತಿ ಎಂದು ಗುರುತಿಸಲಾಗಿದೆ.


ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮುಂಬಯಿ ಹೋಟೆಲ್ ಉದ್ಯಮಿ ನಲ್ಲೂರು ಹುರ್ಲಾಡಿ ರಘುವೀರ್ ಶೆಟ್ಟಿ ಅವರ ತೋಟದ ಕೆಲಸಕ್ಕೆ ಬಂದಿದ್ದರು. ಉತ್ತಮ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಅಗ್ಗಿಂದಾಗೆ ಜಗಳ ತಾರಕಕ್ಕೇರುತ್ತಿತ್ತೆಂದು ತಿಳಿದುಬಂದಿದೆ. ಮಕ್ಕಳು ನೀಡಿರುವ ಮಾಹಿತಿಯನ್ವಯ ರವಿವಾರ ಬೆಳಿಗ್ಗೆ ಇಮ್ಯಾನುಲ್ ಸಿದ್ಧಿ ತನ್ನ ಪತ್ನಿಯಲ್ಲಿ ಮಾತು ಆರಂಭಿಸಿ ಮನೆಯಲ್ಲಿರುವ ಟಿ ವಿ ಮಾರಾಟದ ವಿಚಾರವನ್ನು ಮುಂದಿಟ್ಟಿನಂತೆ. ಅದಕ್ಕೆ ಪತ್ನಿ ಯಶೋಧ ಆಕ್ಷೇಪ ವ್ಯಕ್ತ ಪಡಿಸಿದಾಗ ಅವರೊಳಗೆ ಜಗಳ ಏರ್ಪಟ್ಟಿತ್ತಂತೆ. ಮನೆಯಿಂದ ಓಡಿ ಹೋದ ಯಶೋಧ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಳು. ಪತ್ನಿಯ ಜೀವ ಕಾಪಾಡಲು ಅದೇ ಕೆರೆಗೆ ಹಾರಿ ಇಮ್ಯಾನುಲ್ ಸಿದ್ಧಿ ಎರಡು ಮೂರು ಸಲ ನೀರಿನಿಂದ ಮೇಲೆ ಕೆಳಗೆ ಹೋದರೂ ನಾಲ್ಕನೇ ಬಾರಿ ಆತ ಕೂಡಾ ಅದೇ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *