DAKSHINA KANNADA
ಕಾರ್ಕಳ: ಡಿವೈಡರ್ ನ ದಾರಿದೀಪದ ಕಂಬಕ್ಕೆ ಆಂಬ್ಯುಲೆನ್ಸ್ ಢಿಕ್ಕಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕಾರ್ಕಳ, ಮಾರ್ಚ್ 31; ಕಾರ್ಕಳ-ಉಡುಪಿ ಮಾರ್ಗ ಮದ್ಯೆ ಬಂಗ್ಲೆಗುಡ್ಡೆ ಬಳಿ ಡಿವೈಡರ್ ನ ದಾರಿದೀಪದ ಕಂಬಕ್ಕೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ.
ಕಾರ್ಕಳ ಖಾಸಗಿ ಆಸ್ಪತ್ರೆಯಿಂದ ಕಣ್ಣಿನ ಚಿಕಿತ್ಸೆ ಪಡೆದು ಹೆಬ್ರಿ ತಾಲೂಕು ಎಳ್ಳಾರೆ ಪರಿಸರದ ರೋಗಿಗಳನ್ನು ಮನೆಗೆ ಬಿಡಲು ತೆರಳುತ್ತಿರುವಾಗ ಘಟನೆ ನಡೆದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಎದುರಿನಿಂದ ಬಂದ ಬೈಕ್ ಸವಾರ ಎಡಕ್ಕೆ ತಿರುಗಿಸುವ ವೇಳೆ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಆಂಬುಲೆನ್ಸ್ ನಲ್ಲಿ ನಾಲ್ಕು ಮಂದಿ ರೋಗಿಗಳು ಸೇರಿ 9 ಮಂದಿ ಇದ್ದರು. ಆಂಬುಲೆನ್ಸ್ ಚಾಲಕ ಸಹಿತ ಇತರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
You must be logged in to post a comment Login