Connect with us

    DAKSHINA KANNADA

    ಕಲ್ಲಪಳ್ಳಿ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 2 ಲಕ್ಷ ಪರಿಹಾರ….!!

    ಪುತ್ತೂರು ಸೆಪ್ಟೆಂಬರ್ 23: ಕಲ್ಲಪಳ್ಳಿ ಮತ್ತು ಪಾಣತ್ತೂರು ಮಧ್ಯೆ ಕಳೆದ ಜನವರಿಯಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ 7 ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ 2 ಲಕ್ಷದಂತೆ ಪರಿಹಾರ ಮಂಜೂರು ಮಾಡಿದೆ.


    ಈ ವರ್ಷ ಜನವರಿ 3 ರಂದು ಅಪಘಾತ ಸಂಭವಿಸಿತ್ತು . ಬಲ್ನಾಡು ಚನಿಲ ಪಾಲೆಚ್ಚರ ರಾಜೇಶ್ (38), ಆವರ ಮಗ ಆದರ್ಶ್ (14), ಕುಂಜೂರು ಪಂಜ ದೇವಸ್ಯದ ನಾರಾಯಣ ಅವರ ಪುತ್ರಿ ಸುಮತಿ (26), ಪಾಣಾಜೆ ಅರ್ಲಪದವು ಅರ್ಧಮೂಲೆಯ ಶ್ರೇಯಸ್ (13), ಕುಕ್ಕುಂದೂರಿನ ರವಿಚಂದ್ರ (40), ಸೇಸಮ್ಮ ಅಲಿಯಾಸ್ ಜಯಲಕ್ಷ್ಮಿ, ಅಜ್ಜಿಲಕಲ್ಲು ಬಳಿಯ ಕಾಲೇಂಜಿಲಾದ ವಸಂತ್ ನಾಯ್ಕ್ ಅವರ ಪತ್ನಿ ಮತ್ತು ಬಂಟ್ವಾಳದ ನರಿಕೊಂಬುವಿನ ಬಸ್ ಕಂಡಕ್ಟರ್ ಶಶಿಧರ್ ಈ ಅಪಘಾತದಲ್ಲಿ ಮೃತಪಟ್ಟಿದ್ದರು .

    ಈ ಪ್ರಕರಣದಲ್ಲಿ ಬಸ್ ಯಾವುದೇ ವಿಮೆ ಹೊಂದಿಲ್ಲವಾದ ಕಾರಣ ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ ಸಹಾಯಧನ ಮಂಜೂರು ಮಾಡುವಂತೆ ಸಚಿವ ಎಸ್. ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿಯವರನ್ನು ಕೋರಿದ ಹಿನ್ನಲೆಯಲ್ಲಿ ಪರಿಹಾರ ನಿಧಿಯಿಂದ ಈ ಹಣ ಮಂಜೂರಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply