Connect with us

    DAKSHINA KANNADA

    ಸಮಯ ಮುಗಿದ ಬಳಿಕ ಬಂದ ಮತದಾರರಿಗೆ ಮತದಾನದ ಅವಕಾಶ ನಿರಾಕರಣೆ – ಪೊಲೀಸರೊಂದಿಗೆ ಮಾತಿನ ಚಕಮಕಿ

    ಪುತ್ತೂರು ಡಿಸೆಂಬರ್ 22: ಗ್ರಾಮಪಂಚಾಯತ್ ಚುನಾವಣೆ ಮತದಾನದ ಅಂತಿಮ ಸಮಯದ ಬಳಿಕ ಬಂದ ಮತದಾರರಿಗೆ ಮತದಾನ ಮಾಡಲು ಅವಕಾಶ ನಿರಾಕರಿಸಿದ್ದಕ್ಕೆ ಪೋಲೀಸರು ಹಾಗೂ ಕೆಲವು ಅಭ್ಯರ್ಥಿಗಳ ಪರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.


    ಅತೀ ಸೂಕ್ಷ್ಮ ಮತಗಟ್ಟೆಯಾಗಿರುವ ಬಂಟ್ವಾಳ ಕಲ್ಲಡ್ಕದ ಗೋಳ್ತಮಜಲು ಗ್ರಾಮಪಂಚಾಯತ್ ಮತಗಟ್ಟೆಯಲ್ಲಿ ಸಂಜೆ 5 ಗಂಟೆಗೆ ಮತಗಟ್ಟೆ ಗೇಟ್ ಬಂದ್ ಮಾಡಲಾಗಿತ್ತು. ಆದರೆ 5 ಗಂಟೆ ನಂತರವು ಕೆಲ ಮತದಾರರು ಮತದಾನ ಮಾಡಲು ಆಗಮಿಸಿದ್ದರು. ಈ ಹಿನ್ನಲೆ ಸರಿಯಾಗಿ 5 ಗಂಟೆಗೆ ಮತಗಟ್ಟೆ ಗೇಟ್ ಮುಚ್ಚಿದ ಪೋಲೀಸರು


    ಗೇಟ್ ಒಳಗೆ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಎಂದು ಸ್ಪಷ್ಟಪಡಿಸಿದರು. ಆದರೆ ಮತದಾನಕ್ಕೆ ಆಗಮಿಸಿದ ಜನರು ಪೋಲೀಸ್ ರ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭ ಮತಗಟ್ಟೆ ಕೇಂದ್ರದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಣವಾಗಿತ್ತು.

     

    Share Information
    Advertisement
    Click to comment

    You must be logged in to post a comment Login

    Leave a Reply