Connect with us

LATEST NEWS

ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ – ಕೆ.ಎಸ್ ಈಶ್ಪರಪ್ಪ 

ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ – ಕೆ.ಎಸ್ ಈಶ್ಪರಪ್ಪ 

ಉಡುಪಿ ಮಾರ್ಚ್ 5: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯ ನಡವಳಿಕೆಯೇ ಸರಿಯಿಲ್ಲ ಎಂದು ಹೇಳಿದ ಅವರು ಮುಸಲ್ಮಾನರ ಓಟು ಗಟ್ಟಿ ಮಾಡಲು ಟಿಪ್ಪುಜಯಂತಿ ಆಚರಿಸಿದರು. ಸಿದ್ದರಾಮಯ್ಯ ಮೈಮೇಲೆ ಟಿಪ್ಪು ರಕ್ತ ಹರಿಯುತ್ತಿದೆ ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿಯನ್ನು ಆಚರಿಸಿದರು ಎಂದು ಆರೋಪಿಸಿದರು. ದೇಶದ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ಕೈಯಲ್ಲೆ ಆರ್ ಎಸ್ ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಸಿದ್ದರಾಮಯ್ಯ ಅವರಿಗೆ ಏನು ಮಾಡಲು ಸಾಧ್ಯ ಎಂದು ಸವಾಲೇಸೆದರು.

ಮುಖ್ಯಮಂತ್ರಿಗಳ ಖುರ್ಚಿ ಅಲುಗಾಡುತ್ತಿದ್ದೆ ಹೀಗಾಗಿ ಪ್ರತ್ಯೆಕ ಲಿಂಗಾಯತ ಧರ್ಮ ವಿಚಾರವೆತ್ತಿ ಓಟಿಗಾಗಿ ಜಾತಿ ಧರ್ಮಕ್ಕೆ ಬೆಂಕಿ ಇಡೋದು ಸುಲಭವಾಗಿದ್ಯಾ ಎಂದು ಪ್ರಶ್ನಿಸಿದರು.

ಹಿಂದೂ ಮಠ ಮಂದಿರಗಳನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಬೇರೆ ಧರ್ಮದ ಧಾರ್ಮಿಕ ಕೇಂದ್ರ ಯಾಕೆ ಮುಟ್ಟಿ ನೋಡಲ್ಲ ಆಗ ಸಿದ್ದರಾಮಯ್ಯ ನ ಗಂಡಸ್ತನ ಎಲ್ಲೋಗಿತ್ತು ಎಂದು ಪ್ರಶ್ನಿಸಿದರು.

ಪರಮೇಶ್ವರ್ ಸೋಲಿಗೆ ನಾನು ಕಾರಣ ಅಲ್ಲ ಹೇಳಿ ದೇವಿ ಚಾಮುಂಡಿ ಮೇಲೆ ಪ್ರಮಾಣ ಮಾಡಿ ನಾನು ನೀವು ಹೇಳಿದಂತೆ ನಾನು ಕೇಳ್ತೇನೆ ಉಡುಪಿಯಲ್ಲಿ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *