BANTWAL
ಸಿಎಂ ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ – ನಳೀನ್ ಕುಮಾರ್ ಕಟೀಲ್
ಸಿಎಂ ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ – ನಳೀನ್ ಕುಮಾರ್ ಕಟೀಲ್
ಬಂಟ್ವಾಳ ಮಾರ್ಚ್ 5: ಸಿಎಂ ಸಿದ್ದರಾಮಯ್ಯ ಭಯೋತ್ಪಾದಕ ಅಂತಾ ದಕ್ಷಿಣ ಕನ್ನಡ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಬಂಟ್ವಾಳ ದ ಬಿಸಿರೋಡ್ ನಲ್ಲಿ ನಡೆಸ ಜನಸುರಕ್ಷಾ ರ್ಯಾಲಿ ವೇಳೆ ಹೇಳಿಕೆ ನೀಡಿರುವ ಕಟೀಲ್.
ಸಿಎಂ ಸಿದ್ದರಾಮಯ್ಯ ಭಯೋತ್ಪಾದಕ, ಜನತೆಯಲ್ಲಿ ಭಯ ಉತ್ಪಾದಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ತಲ್ವಾರ್ ಹಿಡಿದವರಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿರುವ ಮೂರು ಮಾರಿಗಳನ್ನು ಓಡಿಸಲು ಜನಸುರಕ್ಷಾ ರ್ಯಾಲಿ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ, ಮತ್ತು ರಮಾನಾಥ್ ರೈ ಎಂಬ ಮಾರಿಗಳನ್ನು ಕೇರಳಕ್ಕೆ ಓಡಿಸಲಾಗುತ್ತದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ನ ಅಂತ್ಯಸಂಸ್ಕಾರವೂ ನೇರವೇರುತ್ತೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಹಾರದಲ್ಲಿ ಜಂಗಲ್ ರಾಜ್ಯ ಮಾಡಿದ್ದ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿದ್ದಾರೆ, ಅದೇ ರೀತಿ ಕರ್ನಾಟಕವನ್ನು ಜಂಗಲ್ ರಾಜ್ಯ ಮಾಡಲು ಹೊರಟಿರುವ ಸಿದ್ದರಾಮಯ್ಯ ಕೂಡಾ ಜೈಲಿನಲ್ಲಿರುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ರಮಾನಾಥ ರೈ ಮುಸ್ಲಿಂ ರ ಕೃಪೆಯಿಂದ ಸಚಿವನಾದೆ ಎನ್ನುತ್ತಾರೆ, ರಮಾನಾಥ ರೈಗಳು ಸಾಧ್ಯವಾದರೆ ತನಗೆ ಮುಸ್ಲಿಂ ಮತಗಳೇ ಗೆಲ್ಲಲು ಸಾಕು ಎನ್ನುವ ಫೋಷಣೆ ಮಾಡಿ ಎಂದು ಸವಾಲೆಸೆದರು.
You must be logged in to post a comment Login