Connect with us

LATEST NEWS

ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ – ಆರೋಪಿ ಆರೆಸ್ಟ್

ಉಡುಪಿ ನವೆಂಬರ್ 21: ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷ ಗಟ್ಟಲೆ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಂದೂರಿನ ರಿತೇಶ್ ಪಟ್ವಾಲ್ ಎಂದು ಗುರುತಿಸಲಾಗಿದ್ದು. ಈತ ಉತ್ತರಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣು ಸ್ಥಾವರದಲ್ಲಿ ತಾನು ಕೆಲಸ ಮಾಡಿಕೊಡುವುದಾಗಿ ಹಣ ಪಡೆದು ಬಹಳಷ್ಟು ಯುವಕರಿಗೆ ಆರೋಪಿ ವಂಚಿಸಿದ್ದ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.


ಬೈಂದೂರು ಯಳಜಿತ್ ನಿವಾಸಿಯಾಗಿರುವ ಸತೀಶ್ ಎಂಬವರಿಗೆ ರಿತೇಶ್ ಪಟ್ವಾಲ್ ಪರಿಚಯವಾಗಿತ್ತು.ರಿತೇಶ್ ತಾನು ಕೈಗಾ ಅಣುಸ್ಥಾವರದಲ್ಲಿ ಕೆಲಸ ಮಾಡಿಕೊಂಡಿದ್ದು, ಸತೀಶ್ ಅವರಿಗೆ ಅಕ್ಟೋಬರ್ 1ರಂದು ಕೈಗಾ ಅಣುಸ್ಥಾವರದಲ್ಲಿ ಕೆಲಸ ಮಾಡಿ ಕೊಡುವುದಾಗಿ ನಂಬಿಸಿದ್ದ. ಅವರಿಂದ ನಗದುರೂಪದಲ್ಲಿ 20 ಸಾವಿರ ರೂ ಪಡೆದಿದ್ದ.ಆರೋಪಿ ರಿತೇಶ್ ಪಟ್ವಾಲ್ ಮೂಲತಃ ಬೈಂದೂರು ಪಡುವರಿಯವನಾಗಿದ್ದು ಈತ ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅವರಿಂದಲೂ 8 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *