Connect with us

KARNATAKA

ಕಲಬುರಗಿ – ಜೀಪ್ ಮತ್ತು ಲಾರಿ ಮಖಾಮುಖಿ ಡಿಕ್ಕಿಗೆ ನಾಲ್ವರ ಬಲಿ

ಕಲಬುರಗಿ ಡಿಸೆಂಬರ್ 21 : ಕಮಾಂಡರ್ ಜೀಪ್ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ವರ್ಷದ ಮಗು ಸೇರಿ ನಾಲ್ವರು ಸಾವನಪ್ಪಿದ ಘಟನೆ ಅಫಜಲಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.


ಮೃತರನ್ನು ಮಾಡ್ಯಾಳ ಗ್ರಾಮದ ಸಂತೋಷ ಹೂವಣ್ಣ ಗೌಡಗಾಂವ (40), ಶಂಕರ ದೇವಪ್ಪ ಜಳಕಿ (55), ಸಿದ್ದಮ್ಮ ಶಂಕರ ಜಳಕಿ ಮತ್ತು ಹುಚ್ಚಪ್ಪ ಮಹಾಂತೇಶ ಜಳಕಿ (5) ಮೃತಪಟ್ಟವರು. ಮಗುವಿನ ತಾಯಿ ಪೂಜಾ ಮಹಾಂತೇಶ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾ ಅವರು ಗಂಡನ ಜೊತೆ ಜಗಳವಾಡಿ ಇಂಡಿ ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದಿಂದ ರಾತ್ರಿ 5 ವರ್ಷದ ಮಗುವಿನ ಕರೆದು ಕೊಂಡು ಅಫಜಲಪುರಕ್ಕೆ ಬಂದಿದ್ದರು. ಮಗಳನ್ನು ಅಫಜಲಪುರದಿಂದ ಮಾಡ್ಯಾಳಕ್ಕೆ ಕರದೊಯ್ಯಲು ಬಂದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *