Connect with us

LATEST NEWS

ಆತ್ಮಕಥೆ ಬಿಡುಗಡೆಗೊಳಿಸಿ ಭಾವುಕರಾದ ಪೂಜಾರಿ

ಆತ್ಮಕಥೆ ಬಿಡುಗಡೆಗೊಳಿಸಿ ಭಾವುಕರಾದ ಪೂಜಾರಿ

ಮಂಗಳೂರು ಜನವರಿ 26: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆತ್ಮಕಥೆ ಸಾಲಮೇಳದ ಸಂಗ್ರಾಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ತಮ್ಮ ಆತ್ಮಕಥೆ ಪುಸ್ತಕವನ್ನು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತಲೆ ಮೇಲೆ ಜನಾರ್ಧನ ಪೂಜಾರಿಯವರು ಹೊತ್ತು ತಂದರು. ನಂತರ ಕಾರ್ಯಕ್ರಮದಲ್ಲಿ ತಮ್ಮ ಆತ್ಮಕಥೆಯನ್ನು ಜನಾರ್ಧನ ಪೂಜಾರಿ ಅವರೇ ಬಿಡುಗಡೆಗೊಳಿಸಿದರು. ಪುಸ್ತಕವನ್ನು ಬಿಡುಗಡೆಗೊಳಿಸಿದ ನಂತರ ಪೂಜಾರಿ ಅವರು ಬಾವುಕರಾದರು.

ಪುಸ್ತಕ ಬಿಡುಗಡೆ ಗೊಳಿಸಿದ ನಂತರ ಮಾತನಾಡಿದ ಜನಾರ್ದನ ಪೂಜಾರಿ ಪುಸ್ತಕ ದ ನಿಖರ ಬೆಲೆ 300 ರೂಪಾಯಿ ಆಗಿದ್ದು , ಆದರೆ ಎಲ್ಲರೂ ಓದಲಿ ಎನ್ನುವ ದೃಷ್ಟಿಯಲ್ಲಿ 50 ರೂಪಾಯಿ ಗೆ ಕೊಡ್ತೇನೆ, ಎಲ್ಲರೂ ಪುಸ್ತಕವನ್ನು ಓದಬೇಕು ಎಂದರು.
ಈ ಕಾರ್ಯಕ್ರಮದಲ್ಲಿ RSS ಮುಖಂಡ ಕಲ್ಲಡ್ಕ ಡಾ ಪ್ರಭಾಕರ್ ಭಟ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *