LATEST NEWS
ಗಾಜಾಪಟ್ಟಿಯಲ್ಲಿ ನಡೆಸುತ್ತಿರುವ ದಾಳಿಗೆ ತಾತ್ಕಾಲಿಕ ವಿರಾಮ -ಕದನ ವಿರಾಮ ಇಲ್ಲ
ಇಸ್ರೇಲ್ ನವೆಂಬರ್ 10: ಇಸ್ರೇಲ್ ಮೇಲೆ ಉಗ್ರ ದಾಳಿ ನಡೆಸಿದ ನಂತರ ಗಾಜಾದಲ್ಲಿರುವ ಹಮಾಸ್ ಉಗ್ರರ ಸದೆ ಬಡಿಯಲು ಯುದ್ದ ಘೋಷಿಸಿರುವ ಇಸ್ರೇಲ್ ಇದೀಗ ಮಾನವೀಯತೆ ನೆಲೆಯಲ್ಲಿ ತಾತ್ಕಾಲಿಕ ವಿರಾಮ ನೀಡಲು ನಿರ್ಧರಿಸಿದೆ ಆದರೆ ಇದು ಕದನ ವಿರಾಮ ಅಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಒಂದು ವೇಳೆ ಕದನ ವಿರಾಮ ಘೋಷಿಸಿದರೆ ಹಮಾಸ್ಗೆ ಶರಣಾದಂತೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಹಮಾಸ್ನೊಂದಿಗೆ ಕದನ ವಿರಾಮ ಎಂದರೆ, ಹಮಾಸ್ಗೆ ಶರಣಾದಂತೆ, ಉಗ್ರವಾದಕ್ಕೆ ಶರಣಾದಂತೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಇಲ್ಲ’ ಎಂದು ನೆತನ್ಯಾಹು ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಮಾಡಿದ ದಾಳಿಯ ಬಳಿಕ, ಇಸ್ರೇಲ್ ಪಡೆಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಿವೆ ಎಂದು ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ.
‘ಗಾಜಾವನ್ನು ಆಳಲು ಮಾಡಲು ನಾವು ಬಯಸುವುದಿಲ್ಲ. ನಾವು ಅದನ್ನು ವಶಪಡಿಸಿಕೊಳ್ಳುವುದಿಲ್ಲ. ನಾವು ನಮಗೆ ಮತ್ತು ಗಾಜಾಕ್ಕೆ ಉತ್ತಮ ಭವಿಷ್ಯ ನೀಡಲು ಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.
ಉತ್ತರ ಗಾಜಾದ ಪ್ರದೇಶಗಳಲ್ಲಿ ದೈನಂದಿನ ನಾಲ್ಕು ಗಂಟೆಗಳ ಮಿಲಿಟರಿ ಕಾರ್ಯಾಚರಣೆಗಳ ವಿರಾಮದೊಂದಿಗೆ ಮುಂದುವರಿಯಲು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಶ್ವೇತಭವನ ಗುರುವಾರ ಹೇಳಿದೆ. ಕಳೆದ ಹಲವಾರು ದಿನಗಳಿಂದ, ಇಸ್ರೇಲ್ ಹಿಂಸಾಚಾರವನ್ನು ಗಂಟೆಗಳ ಕಾಲ ಸ್ಥಗಿತಗೊಳಿಸಿ, ಅಲ್ಲಿ ಅದು ನಾಗರಿಕರನ್ನು ದಕ್ಷಿಣಕ್ಕೆ ಸ್ಥಳಾಂತರಿಸಲು ಅನುವು ಮಾಡಿಕೊಡುತ್ತಿದೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಸಂಜೆ ಹೇಳಿಕೆಯಲ್ಲಿ ಹಮಾಸ್ ಹಿಡಿದಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ “ಯಾವುದೇ ಕದನ ವಿರಾಮ” ಇರುವುದಿಲ್ಲ ಎಂದು ಹೇಳಿದ್ದಾರೆ.
You must be logged in to post a comment Login