Connect with us

    KARNATAKA

    ಸವಾಲಿನ ಹವಾಮಾನದ ಮಧ್ಯೆ ಎಡಕುಮೇರಿ – ಕಡಗರವಲ್ಲಿ ನಿಲ್ದಾಣಗಳ ನಡುವೆ ಹಳಿ ಮರುಸ್ಥಾಪನೆಗೆ ರೈಲ್ವೇ ಇಲಾಖೆ ಸರ್ವ ಪ್ರಯತ್ನ..! 

    ಹಾಸನ :  ಎಡಕುಮೇರಿ ಮತ್ತು ಕಡಗರವಲ್ಲಿ ನಿಲ್ದಾಣಗಳ ನಡುವಿನ ಭೂಕುಸಿತದ ಸ್ಥಳದಲ್ಲಿ ಸವಾಲಿನ ಹವಾಮಾನದ ಹೊರತಾಗಿಯೂ ಹಳಿಗಳ ಮರುಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

    ಪ್ರಸ್ತುತ 1,900 ಕ್ಯೂಬಿಕ್ ಮೀಟರ್ ಬಂಡೆಗಳನ್ನು ಭೂ ಕುಸಿತದ ಸ್ಥಳದಲ್ಲಿ ಇಳಿಸಲಾಗಿದ್ದು, ಮರುಸ್ಥಾಪನೆಯನ್ನು ಪೂರ್ಣಗೊಳಿಸಲು ಇನ್ನೂ 2,000 ಕ್ಯೂಬಿಕ್ ಮೀಟರ್ ಹೆಚ್ಚುವರಿ ಅಗತ್ಯವಿದೆ. ಒಟ್ಟು 100,000 ಖಾಲಿ/ತುಂಬಿದ ಮರಳು ಚೀಲಗಳನ್ನು  ತರಿಸಲಾಗಿದೆ. ಇನ್ನು ಉಳಿದ  ಚೀಲಗಳು ಅಗತ್ಯಕ್ಕೆ ಅನುಗುಣವಾಗಿ ಮೈಸೂರಿನಿಂದ ಬರಲಿವೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. . ಕಾಮಗಾರಿ ನಡೆಸಲು ಅಗತ್ಯವಾಗಿ ಬೇಕಾಗಿದ್ದ ಇಂಧನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿಯವರೆಗೆ   26 ಬ್ಯಾರೆಲ್ ಡೀಸೆಲ್  ಪೂರೈಕೆ ಮಾಡಲಾಗಿದೆ.

    ಅದರಲ್ಲಿ 15 ಬ್ಯಾರೆಲ್  ಬಳಸಲಾಗಿದೆ ಮತ್ತು 11 ಬ್ಯಾರೆಲ್ ಗಳು ದಾಸ್ತಾನಿನಲ್ಲಿವೆ. 6 ಹಿಟಾಚಿ ಮತ್ತು 5 ಪೋಕ್ಲೈನ್ ಯಂತ್ರಗಳು ರಾತ್ರಿನ ಹಗಲು ಕಾರ್ಯದಲ್ಲಿ ತೊಡಗಿಕೊಂಡಿವೆ.  ಹೆಚ್ಚುವರಿಯಾಗಿ, ಹುಬ್ಬಳ್ಳಿಯ ಮುಖ್ಯ ಕಚೇರಿಯಲ್ಲಿರುವ ವಾರ್ ರೂಂ ಮಾಡಿ ಪ್ರಗತಿಯ ನೈಜ-ಸಮಯದ ಮೇಲ್ವಿಚಾರಣೆಯನ್ನು ಒದಗಿಸಲು 3 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಇಂದುಮಂಗಳವಾರ  ಭಾರೀ ಮಳೆ ಮತ್ತು ಹಲವಾರು ಸವಾಲುಗಳ ಹೊರತಾಗಿಯೂ, ಕಾರ್ಮಿಕರು 23 ವ್ಯಾಗನ್ ಬಂಡೆಗಳನ್ನು ಯಶಸ್ವಿಯಾಗಿ ಇಳಿಸಿದ್ದಾರೆ. ಇಲ್ಲಿಯವರೆಗೆ 94 ವ್ಯಾಗನ್ ಬಂಡೆಗಳನ್ನು ಸ್ಥಳದ ಸ್ಥಳದಲ್ಲಿ ಇಳಿಸಲಾಗಿದೆ ಮತ್ತು 65 ವ್ಯಾಗನ್ ಗಳನ್ನು ಸಾಗಿಸಲಾಗುತ್ತಿದೆ. ಟ್ರ್ಯಾಕ್ ಅನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ಸಮರೋಪದಿಯಲ್ಲಿ ನಡೆಯುತ್ತಿದ್ದು  ಪುನಃಸ್ಥಾಪನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನೈಋತ್ಯ ರೈಲ್ವೆ ಬದ್ಧವಾಗಿದೆ  ಎಂದು ಹೇಳಿಕಯಲ್ಲಿ ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply