Connect with us

    LATEST NEWS

    ದೇಶದಲ್ಲಿ ಶಾಂತಿ ಕದಡಿ ಉಗ್ರರು ಪಾಕಿಸ್ತಾನಕ್ಕೆ ಓಡಿ ಹೋದರೆ…ಅಲ್ಲೇ ಅವರನ್ನು ಹೊಡೆಯುತ್ತೇವೆ – ರಾಜನಾಥ್ ಸಿಂಗ್

    ನವದೆಹಲಿ ಎಪ್ರಿಲ್ 06 : ನೆರೆಹೊರೆ ದೇಶ ಭಾರತದ ಗಡಿಯೊಳಗೆ ಉಗ್ರರನ್ನು ನುಗ್ಗಿಸಿ ಶಾಂತಿ ಕದಡಲು ಯತ್ನಿಸಿದರೆ ನಾವು ಅವರ ದೇಶದೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.


    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಉಗ್ರರು ಭಾರತದೊಳಗೆ ಬಂದು ಶಾಂತಿ ಕದಡಿ ಒಂದು ವೇಳೆ ಅವರು ಪಾಕಿಸ್ತಾನಕ್ಕೆ ಓಡಿ ಹೋದರೆ ನಾವು ಪಾಕಿಸ್ತಾನಕ್ಕೆ ಪ್ರವೇಶಿಸಿ ಅವರನ್ನು ಕೊಲ್ಲುತ್ತೇವೆ ಎಂದರು. ಗಡಿಯಾಚಿಗಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಶಕ್ತವಾಗಿದೆ. ಈ ವಿಷಯ ಇತ್ತೀಚೆಗೆ ಪಾಕಿಸ್ತಾನಕ್ಕೆ ಅರಿವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

    ಈ ನಡುವೆ ಆಂಗ್ಲ ಮಾಧ್ಯಮ ‘ದಿ ಗಾರ್ಡಿಯನ್‌’ನಲ್ಲಿ ಇತ್ತೀಚೆಗೆ ಪ್ರಕಟವಾಗಿದ್ದ, ‘ಭಾರತದ ಗುಪ್ತಚರ ಸಂಸ್ಥೆ ಅಧಿಕಾರಿಗಳು ಪಾಕಿಸ್ತಾನದಲ್ಲಿ ಸುಮಾರು 20ಕ್ಕೂ ಹೆಚ್ಚು ಉಗ್ರರನ್ನು ಸದ್ದಿಲ್ಲದೇ ಹತ್ಯೆ ಮಾಡಿದ್ದಾರೆ’ ಎಂಬ ವರದಿ ಬಂದ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply