LATEST NEWS
ಮಾನವ ಕಳ್ಳಸಾಗಾಟ ಜಾಲಕ್ಕೆ ಸಿಲುಕಿದ್ದ ಜೆಸಿಂತಾ ಮರಳಿ ತಾಯ್ನಾಡಿಗೆ

ಮಾನವ ಕಳ್ಳಸಾಗಾಟ ಜಾಲಕ್ಕೆ ಸಿಲುಕಿದ್ದ ಜೆಸಿಂತಾ ಮರಳಿ ತಾಯ್ನಾಡಿಗೆ
ಉಡುಪಿ,ಸೆಪ್ಟಂಬರ್ 23: ಏಜೆಂಟ್ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ. ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಸಂಚಾಲಕ ಡಾ|ರವೀಂದ್ರನಾಥ್ ಶ್ಯಾನುಭಾಗ್ ಅವರು ಮುಂಬಯಿಯ ಮಾನವ ಕಳ್ಳಸಾಗಾಣಿಕೆಯ ಜಾಲದ ಮೂಲಕ ಸೌದಿಅರೇಬಿಯಾಕ್ಕೆ ಸಾಗಿಸಲ್ಪಟ್ಟು “ಯಾಂಬೂ” ಪಟ್ಟಣದ ಅರಬ್ಬಿಯ ಮನೆಯೊಂದರಲ್ಲಿ ಗುಲಾಮಳಾಗಿ ದಿನದೂಡುತ್ತಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಮುದರಂಗಡಿಯ ಜೆಸಿಂತಾಳನ್ನು ಇದೀಗ ಅರೆ ಜೀವ ಸ್ಥಿತಿಯಲ್ಲಿ ಭಾರತಕ್ಕೆ ಕರೆತರಲಾಗಿದೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಳೆದ ಏಪ್ರಿಲ್ ತಿಂಗಳಲ್ಲಿ ಜೆಸಿಂತಾಳ ರಕ್ಷಣೆಗಾಗಿ ಗಲ್ಫ್ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ ಜೆಡ್ಡಾದ ಎನ್.ಆರ್.ಐ. ಪೋರಂನ ಅಧ್ಯಕ್ಷ ರೋಶನ್ ರಾಡ್ರಿಗಸ್ ಮತ್ತವರ ಸಂಗಡಿಗರ ಸತತ ಪ್ರಯತ್ನದ ಫಲವಾಗಿ 14 ತಿಂಗಳ ಬಳಿಕ ಆಕೆ ತನ್ನ ಮಕ್ಕಳನ್ನು ಸೇರಿಕೊಂಡಿದ್ದಾರೆ.


Jacintha Mendonca