Connect with us

    DAKSHINA KANNADA

    ಪುತ್ತೂರು : ವಾಹನ ಅಪಘಾತಕ್ಕೆ ಬಲಿಯಾದ ಬಿಡಾಡಿ ಗೋವಿಗೆ ಮುಂದೆನಿಂತು ಅಂತ್ಯ ಸಂಸ್ಕಾರ ನಡೆಸಿದ ಪುಣ್ಯತ್ಮರು..!

    ಪುತ್ತೂರು : ವಾಹನ ಡಿಕ್ಕಿಗೆ ಬಲಿಯಾದ ಬಿಡಾಡಿ ಗೋವಿನ ಅಂತ್ಯ ಸಂಸ್ಕಾರ ನಡೆಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

     

    ಕಡಬ ಪೇಟೆಯಲ್ಲಿ ರಾತ್ರಿ ವೇಳೆ ಸ್ಕೂಟಿಯೊಂದು ಮಾರ್ಗದಲ್ಲಿದ್ದ ಗೋವಿಗೆ ಡಿಕ್ಕಿಯಾಗಿ ಗೋವು ಗಂಭೀರ ಗಾಯಗೊಂಡಿತ್ತು. ಸ್ಕೂಟಿ ವಾಹನ ಸವಾರ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದ. ಸ್ಥಳಕ್ಕೆ ಪೊಲೀಸರು, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಗಮಿಸಿದ್ದರು. ಕೂಡಲೇ ಸಂಘಟನೆಯ ಕಾರ್ಯಕರ್ತರು ಪಶುವೈದ್ಯಾಧಿಕಾರಿ ಡಾ. ಅಜಿತ್ ಅವರಿಗೆ ಮಾಹಿತಿ ನೀಡಿದರು. ರಾತ್ರಿ 12  ಗಂಟೆಯ ಸುಮಾರಿಗೆ ಸ್ಥಳಕ್ಕಾಗಮಿಸಿ ಡಾ. ಅಜಿತ್ ಚಿಕಿತ್ಸೆ ನೀಡಿದರೂ  ಗೋವು ಅದಾಗಲೇ ಅಸುನೀಗಿತ್ತು. ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಕೋಡಿಬೈಲ್ ಅವರ ನೇತೃತ್ವದಲ್ಲಿ ಜೆಸಿಬಿ ತರಿಸಿ ಕಡಬ ಸ್ಮಶಾನದಲ್ಲಿ ಗೋವಿನ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply