Connect with us

    LATEST NEWS

    ಹಿಜಬ್ ವಿವಾದ – ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ

    ಮಂಗಳೂರು ಮಾರ್ಚ್ 5: ಹಿಜಾಬ್ ವಿವಾದ ತಾರಕಕ್ಕೇರಿದ್ದ ಮಂಗಳೂರಿನ ಕಾರ್ಟ್ ಸ್ಟ್ರೀಟ್ ನಲ್ಲಿರುವ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಸಾರಲಾಗಿದೆ


    ಕಾರ್ ಸ್ಟ್ರೀಟ್ ನಲ್ಲಿರುವ ಈ ಸರಕಾರಿ ಕಾಲೇಜಿನಲ್ಲಿ ಕಳೆದ 2 ದಿನಗಳಿಂದ ಹಿಜಬ್ ವಿಚಾರಕ್ಕೆ ಗೊಂದಲ ಏರ್ಪಟ್ಟಿತ್ತು, ನಿನ್ನೆ ಇದೇ ವಿಚಾರವಾಗಿ ವಿಧ್ಯಾರ್ಥಿನಿಯರು ಹಾಗೂ ಕೆಲವು ವಿಧ್ಯಾರ್ಥಿಗಳ ನಡುವೆ ವಾಗ್ವಾದ ಏರ್ಪಟ್ಟಿದ್ದು, ಹಿಜಬ್ ಧರಿಸಿದ ವಿಧ್ಯಾರ್ಥಿನಿಯರನ್ನು ಕಾಲೇಜಿನ ಕೆಲ ಉಪನ್ಯಾಸಕರು ತರಗತಿಗೆ ತೆರಳದಂತೆ ನಿನ್ನೆ ತಡೆದಿದ್ದು ಎಂದು ಆರೋಪಿಸಲಾಗಿತ್ತು.

    ಈ ಹಿನ್ನಲೆ ಮತ್ತೆ ಗೊಂದಲ ಏರ್ಪಡದಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಿಸಲಾಗಿದ್ದು, ಸದ್ಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸದ್ಯ ಆನ್‌ಲೈನ್ ತರಗತಿಯನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಮೆಸೇಜ್ ಕಳುಹಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply