Connect with us

    LATEST NEWS

    ತೀರ್ಪು ನಮ್ಮಪರವಾಗಿ ಬರುವ ವಿಶ್ವಾಸ – ಯಶ್ ಪಾಲ್ ಸುವರ್ಣ

    ಉಡುಪಿ ಮಾರ್ಚ್ 15: ಹೈಕೋರ್ಟ್ ನೀಡಲಿರುವ ತೀರ್ಪು ಕಾಲೇಜು ಆಡಳಿತ ಮಂಡಳಿಯ ಪರವಾಗಿ ಬರುವ ವಿಶ್ವಾಸ ಇದೆ ಎಂದು ಹಿಜಬ್ ವಿವಾದದ ಪ್ರಾರಂಭದ ಕೇಂದ್ರ ಬಿಂದು ಉಡುಪಿ ಸರಕಾರಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.


    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸ ವಿದ್ದು, ಯಾವುದೇ ಧಾರ್ಮಿಕ ಆಚರಣೆಗೆ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಇಲ್ಲ, ಹೈಕೋರ್ಟ್ ನ ಮಧ್ಯಂತರ ತೀರ್ಪಿನಲ್ಲಿ ಅದು ಉಲ್ಲೇಖ ಆಗಿದೆ. ಮತಾಂಧ ಶಕ್ತಿಗಳಯ ದೇಶದ್ರೋಹಿ ಸಂಘಟನೆಯ ಕುಮ್ಮಕ್ಕಿನಿಂದ ವಿವಾದ ವ್ಯಾಪಿಸಿತು. ಒಂದು ಕಾಲೇಜಿನ ವಿಚಾರ ದೇಶ ಮಟ್ಟದಲ್ಲಿ ಚರ್ಚೆ ಆಯಿತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಿಜಾಬ್ ವಿವಾದದಿಂದ ಸಮಸ್ಯೆಯಾಗಿದೆ. ಹೈಕೋರ್ಟ್ ಶಿಕ್ಷಣಕ್ಕೆ ಒತ್ತು ಕೊಡುವ ತೀರ್ಪು ಕೊಡುವ ನಿರೀಕ್ಷೆಯಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply