Connect with us

    LATEST NEWS

    ಬಾರಿ ಸುಂಟರಗಾಳಿ ಅಬ್ಬರಕ್ಕೆ ಕಂಗೆಟ್ಟ ದಕ್ಷಿಣಕನ್ನಡ – ಅಪಾರ ಹಾನಿ

    ಮಂಗಳೂರು ಜುಲೈ 24: ನಿನ್ನೆ ರಾತ್ರಿ ಬಿಸಿದ ಭಾರೀ ಗಾಳಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ. ಮಂಗಳೂರು ನಗರ ಬಂಟ್ವಾಳದಲ್ಲಿ ವಿದ್ಯುತ್ ಕಂಬಗಳು ಬುಡಸಮೇತ ಕಿತ್ತು ಬಂದ ಘಟನೆ ವರದಿಯಾಗಿದೆ.


    ಮಂಗಳೂರಿನಲ್ಲಿ ರಾತ್ರಿ ಬೀಸಿದ ಭಾರಿ ಸುಂಟರಗಾಳಿಗೆ ಕಾವೂರು ಜಂಕ್ಷನ್ ನಲ್ಲಿರುವ ಕಟ್ಟಡದಲ್ಲಿ ಹಾಕಲಾಗಿದ್ದ ತಗಡಿನ ಮೆಲ್ಟಾವಣೆ ಬಡುಸಮೇತ ಗಾಳಿ ಹಾರಿ ರಸ್ತೆ ಮೇ್ಲೆ ಬಿದ್ದಿದೆ. ಈ ವೇಳೆ ಅಲ್ಲಿ ಇದ್ದ ಕಾರು ಆಟೋರಿಕ್ಷಾ ಬೈಕು ಸೇರಿದಂತೆ ಹಲವು ವಾಹನಗಳು ಜಕಮ್ ಗೊಂಡಿದೆ. ಅದೃಷ್ಟವಶಾತ್ ಯಾರು ಇರದ ಕಾರಣ ಪ್ರಾಣ ಹಾನಿ ತಪ್ಪಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ತಗಡು ಶೀಟಿನ ಮೇಲ್ಚಾವಣಿ ಪೈಪು ಕಂಬಗಳ ಸಮೇತ ಹಾರಿ ಬರುವುದಾನ್ನು ಕಂಡು ಕೆಲವು ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ.


    ಇನ್ನು ಬಂಟ್ವಾಳದಲ್ಲೂ ಅಪಾರ ಹಾನಿಯಾಗಿದ್ದು, ಹಠಾತ್ ಸುರಿದ ಗಾಳಿ, ಮಳೆಗೆ ಹಲವು ವಿದ್ಯುತ್ ಕಂಬಗಳು, ಮೊಬೈಲ್ ಟವರ್, ಅಂಗಡಿ, ಹೋಟೆಲ್ ಗಳ ನಾಮಫಲಕಗಳು ಧರಾಶಾಹಿಯಾದ ಘಟನೆ ಬಿ.ಸಿ.ರೋಡ್ ಪರಿಸರದಲ್ಲಿ ಮಂಗಳವಾರ ರಾತ್ರಿ 10ರ ವೇಳೆಗೆ ನಡೆದಿದೆ. ಘಟನೆಯಿಂದಾಗಿ ಬಿ.ಸಿ.ರೋಡ್ ನಾರಾಯಣ ಗುರು ವೃತ್ತದಿಂದ ಕೈಕಂಬದ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವೃತ್ತದ ಬಳಿ ವಿದ್ಯುತ್ ಕಂಬಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಅಗ್ನಿ ಶಾಮಕ ದಳದ ಸಿಬ್ಬಂದಿ, ಬಂಟ್ವಾಳ ನಗರ ಹಾಗೂ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply