KARNATAKA
ಹಾವೇರಿಯಲ್ಲಿ ಮಹಾಮಳೆ ತಂದ ಆಪತ್ತು, ಮನೆಗೋಡೆ ಕುಸಿದು ಮಕ್ಕಳ ಸಹಿತ ಮೂವರು ಮೃತ್ಯು, ಮೂವರು ಗಂಭೀರ
ಹಾವೇರಿ : ಮಹಾಮಳೆ ರಾಜ್ಯಾದ್ಯಾಂತ ಬಿರುಸಾಗಿದ್ದು ಹಾವೇರಿಯಲ್ಲಿ ಇಬ್ಬರು ಪುಟ್ಟ ಕಂದಮ್ಮಗಳು, ಮಹಿಳೆ ಸೇರಿ ಒಂದೇ ಕುಟುಂಬದ ಮೂವರನ್ನು ಬಲಿಪಡೆದುಕೊಂಡಿದೆ.
ಶುಕ್ರವಾರ ನಸುಕಿನ ಜಾವ 3-30 ಕ್ಕೆ ಮನೆಯ ಗೋಡೆ ಕುಸಿದು ಬಿದ್ದು ಮಲಗಿದ್ದ ಆರು ಮಂದಿ ಸದಸ್ಯರಲ್ಲಿ ಮೂವರು ದಾರುಣ ಅಂತ್ಯ ಕಂಡಿದ್ದಾರೆ. ಹಾವೇರಿಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಮನೆಯೊಳಗೆ ಮಲಗಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಮನೆ ಕುಸಿದಿದೆ. ಇದರಿಂದ ಒಬ್ಬರು ಮಹಿಳೆ, ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದು, ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು ಸವಣೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನಮ್ಮ (30), ಅಮೂಲ್ಯ (3), ಅನನ್ಯಾ (6) ಮೃತಪಟ್ಟವರಾಗಿದ್ದರೆ, ವೃದ್ಧೆ ಯಲ್ಲಮ್ಮ, ಪುತ್ರ ಮುತ್ತು, ಸೊಸೆ ಸುನೀತಾ ಳಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳ ಪೈಕಿ ವಯೋವೃದ್ಧೆಯ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಹುಲಗೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
You must be logged in to post a comment Login