LATEST NEWS
ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ…!!
ಮಂಗಳೂರು ಅಕ್ಟೋಬರ್ 17: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದಾಗಿ ಮಳೆ ಅಬ್ಬರ ಜೊರಾಗಿದ್ದು. ನಿನ್ನೆಯಿಂದ ಕರಾವಳಿಯಾದ್ಯಂತ ಆರಂಭವಾಗಿರುವ ಮಳೆ ಇಂದು ಮುಂದುವರೆದಿದೆ.,
ಮಂಗಳೂರಿನಲ್ಲಿ ರಾತ್ರಿಯಿಂದ ಒಂದೇ ಸಮನೆ ಸುರಿದ ಮಳೆಗೆ ವಿವಿಧ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ನಗರದ ಅಳಕೆ, ಕುದ್ರೋಳಿ ಸೇರಿದಂತೆ ಹಲವು ತಗ್ಗು ಪ್ರದೇಶದಲ್ಲಿನ ರಸ್ತೆಗಳು ಕೆರೆಯಂತಾಗಿದೆ. ಇನ್ನು ಮಳೆಯಿಂದಾಗಿ ಜಿಲ್ಲೆಯಲ್ಲಿನ ನದಿಗಳು ಮೈದುಂಬಿ ಹರಿದಿವೆ. ಧರ್ಮಸ್ಥಳ ಬಳಿ ಹೊಳೆಯ ನೀರು ರಸ್ತೆಗೆ ಬಂದು ವಾಹನ ಸವಾರರಿಗೆ ತೊಂದರೆಯುಂಟಾಗಿದೆ. ಭಾರೀ ನೀರಿನ ಹರಿವು ಹಿನ್ನಲೆ ಉಜಿರೆ-ಧರ್ಮಸ್ಥಳ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು.
You must be logged in to post a comment Login