Connect with us

LATEST NEWS

ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ್ – ರೆಡ್ ಅಲರ್ಟ್ ಘೋಷಣೆ

ಮಂಗಳೂರು ಜೂನ್ 15: ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಹವಾಮಾನ ಇಲಾಖೆ ಜೂನ್‌‌ 15 ಹಾಗೂ 16ರಂದು ರೆಡ್‌ ಅಲರ್ಟ್‌‌ ಹಾಗೂ ಜೂನ್‌‌ 17ರಂದು ಆರೆಂಜ್‌ ಅಲರ್ಟ್‌‌ ಘೋಷಿಸಿದೆ.


ಕಳೆದ ಮೂರು ದಿನಗಳಿಂದ ಪ್ರಾರಂಭವಾದ ಮಳೆ ಮುಂದುವರೆದಿದೆ. ಮಳೆಯ ಜೊತೆ ಬಲವಾದ ಗಾಳಿ ಕೂಡಾ ಬೀಸಿದ್ದ ಕಾರಣ ಹಲವು ಕಡೆಗಳಲ್ಲಿ ಹಾನಿಯುಂಟಾಗಿದೆ. ಕರಾವಳಿ ಜಿಲ್ಲೆಗಳಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು.


ಉಡುಪಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, 200 ಮಿಮಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರತಿಗಂಟೆಗೆ 45 ರಿಂದ 55 ಕಿಮೀ ಗಾಳಿ ಬೀಸುವ ಸಾಧ್ಯತೆ, ಮೀನುಗಾರರಿಗೆ ಎಚ್ಚರಿಕೆವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *