LATEST NEWS
ಮನೆಯಲ್ಲಿದ್ದ ನಗದು ಹಾಗೂ ಚಿನ್ನದ ಜೊತೆ ಐವರು ನಾಪತ್ತೆ….!!
ಮಂಗಳೂರು ಮಾರ್ಚ್ 14: ಒಂದೇ ಕುಟುಂಬದ ಐವರು ಮಂದಿ 1.40 ಲಕ್ಷ ಸೇರಿದಂತೆ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಂಜೆಯಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಕರಿಂಜೆಯ ಸ್ವರ್ಣನಗರದ ನಿವಾಸಿಗಳಾದ ಜ್ಯೋತಿ ಮಣಿ (36), ಮನೋರಂಜಿತಂ (56), ಡೆಬೊರಾ (11), ಜೂಡ್ ಎಮ್ಯಾನುಯೆಲ್ (10) ಹಾಗೂ ಹೆಪ್ಸಿಭಾ (8) ಎನ್ನಲಾಗಿದೆ.
ಜಯರಾಜ್ ಶೇಖರ್ ಅವರ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆ ನಾಪತ್ತೆಯಾಗಿದ್ದು, ಅಲ್ಲದೇ, ಲಾಕರ್ನಲ್ಲಿರಿಸಿದ್ದ 1.40 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕೂಡಾ ನಾಪತ್ತೆಯಾಗಿದೆ ಎಂದು ಜಯರಾಜ್ ಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶೇಖರ್ ಅವರ ಪತ್ನಿ ತನ್ನ ಚಿನ್ನಾಭರಣಗಳನ್ನು ಪತಿಗೆ ತಿಳಿಯದೇ ಅಡವಿಟ್ಟು ಸಾಲ ಪಡೆದು ತನ್ನ ಸ್ನೇಹಿತೆಗೆ 1.80 ಲಕ್ಷ ರೂ.ಗಳನ್ನು ನೀಡಿದ್ದಾಳೆ. ಶೇಖರ್ಗೆ ಈ ವಿಷಯ ತಿಳಿದ ಬಳಿಕ, ಚಿನ್ನಾಭರಣವನ್ನು ತರುವಂತೆ ತನ್ನ ಹೆಂಡತಿಗೆ ಹೇಳಿದ್ದಾರೆ.ಈ ಘಟನೆ ನಡೆದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login