Connect with us

    DAKSHINA KANNADA

    ಸುಳ್ಯ – ಕೆಎಸ್ಆರ್ ಟಿಸಿ ಬಸ್ ನಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನಿಗೆ ಧರ್ಮದೇಟು

    ಸುಳ್ಯ  ಸೆಪ್ಟೆಂಬರ್ 23: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕುಳಿತಿದ್ದ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಳ್ಯ ಪೈಜಾರು ಎಂಬಲ್ಲಿ ನಡೆದಿದೆ.
    ಕಿರುಕುಳ ನೀಡಿದ ಯುವಕನನ್ನು ಕಾಸರಗೋಡಿನ ಅಡೂರು ನಿವಾಸಿ ಮಹಮ್ಮದ್ ನಿಯಾಝ್ ಎಂದು ಗುರುತಿಸಲಾಗಿದೆ.


    ಬೆಂಗಳೂರಿನಿಂದ ಸುಬ್ರಹ್ಮಣ್ಯ ಕ್ಕೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಬರುತ್ತಿದ್ದ ಯುವತಿಗೆ ಮಹಮ್ಮದ್ ನಿಯಾಝ್ ಕಿರುಕುಳ ನೀಡಿದ್ದಾನೆ. ಈ ವೇಳೆ ಸುಬ್ರಹ್ಮಣ್ಯ ದಲ್ಲಿ ಬಸ್ ನಿಂದ ಇಳಿದ ಬಳಿಕ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದ ಹಿಂದೂ ಯುವತಿ, ಮಾಹಿತಿ ಆಧಾರದಲ್ಲಿ ಸುಬ್ರಹ್ಮಣ್ಯ ದಿಂದ ಸುಳ್ಯಕ್ಕೆ ಹೊರಟಿದ್ದ ಆರೋಪಿತ ಯುವಕನನ್ನು ಬೆನ್ನಟ್ಟಿ ತಂಡ ಹಲ್ಲೆ ನಡೆಸಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡಿದ್ದ ಯುವಕನನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply