Connect with us

LATEST NEWS

ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆ

ಮಂಗಳೂರು, ಅಕ್ಟೋಬರ್ 12 :ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ವಾಹನದಲ್ಲಿ ಗಾಂಜಾ ಪತ್ತೆಯಾಗಿದೆ. ವೇಗವಾಗಿ ಬಂದ ಲಾರಿ ಹರಿದು ಯುವಕನೋರ್ವ ದಾರುಣವಾಗಿ ಮೃತ ಪಟ್ಟ ದುರ್ಘಟನೆ ಮಂಗಳೂರು ನಗರದ ಉಳ್ಳಾಲ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಉಳ್ಳಾಲದ ತೊಕ್ಕೊಟ್ಟುವಿನ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಮೃತನನ್ನು ಕೆಸಿ ರೋಡಿನ 30 ವರ್ಷದ ಸಲೀಂ ಎಂದು ಗುರುತ್ತಿಸಲಾಗಿದೆ. ಮೂಲತ ಬೆಳ್ತಂಗಡಿಯವರಾದ ಸಲೀಂ ಅವರು ಕೆ ಸಿ ರೋಡಿನಲ್ಲಿ ವಾಸವಾಗಿದ್ದರು.

ಸಲೀಂ ದ್ವಿಚಕ್ರ ವಾಹನದ ಸೈಡ್ ಸ್ಟ್ಯಾಂಡ್ ಹಾಕಿ  ವಾಹನ ಚಲಾಯಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆಶ್ಚರ್ಯಕರ ಸಂಗತಿ ಎಂದರೆ ಮೃತನ ದ್ವಿಚಕ್ರ ವಾಹನದಲ್ಲಿ ಎರಡು ಪ್ಯಾಕೆಟ್ ಗಾಂಜ ಪತ್ತೆಯಾಗಿದೆ.

ಇದು ಉಳ್ಳಾಲ ಪರಿಸರದಲ್ಲಿನ ಗಾಂಜಾ ಹಾವಳಿಯ ತೀವೃತೆಯನ್ನು ತೋರಿಸುತ್ತಿದೆ. ಉಳ್ಳಾಲ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *