Connect with us

DAKSHINA KANNADA

ಮಂಗಳೂರಿನ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಕೀಲು ನೋವು ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು, ಜೂನ್ 27: ಮಂಗಳೂರಿನ ಮಾರ್ಗನ್ಸ್‌ಗೇಟ್‌ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಜೂನ್ 21 ಮತ್ತು 22 ರಂದು ಕೀಲು ನೋವು ತಪಾಸಣೆ ಮತ್ತು ಚಿಕಿತ್ಸೆಯ ಕುರಿತು ಎರಡು ದಿನಗಳ ಉಚಿತ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ವಿವಿಧ ಕೀಲು ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರಿಗೆ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ಒದಗಿಸುವ ಗುರಿಯೊಂದಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜನಾರ್ಧನ ವಿ ಹೆಬ್ಬಾರ್ ಶಿಬಿರದ ಉದ್ದೇಶ ಮತ್ತು ಸವಲತ್ತುಗಳ ಕುರಿತು ವಿವರಣೆಯನ್ನು ನೀಡಿದರು.

ವಿಶೇಷ ಅತಿಥಿಗಳಾಗಿ ಇಂದೋರ್‌ನ ಪ್ರೊ. ವೆಂಕಟರಾಮನ್, ಜರ್ಮನಿಯ ಬೀಟ್ರಿಕ್ಸ್ ಮತ್ತು ಪೋರ್ಚುಗಲ್‌ನ ಡಾ. ಮಾರಿಯೋ ಮಾರ್ಕ್ಸ್, ಮಾರ್ಗರಿಡಾ ಮತ್ತು ಕೆರೊಲಿನಾ ಭಾಗವಹಿಸಿದ್ದರು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಒಟ್ಟು 73 ರೋಗಿಗಳು ಉಚಿತ ಶಿಬಿರದ ಪ್ರಯೋಜನವನ್ನು ಪಡೆದರು. ರೋಗಿಗಳು ಉಚಿತ ನೋಂದಣಿ, ಉಚಿತ ವೈದ್ಯರ ಸಮಾಲೋಚನೆ ಮತ್ತು ಒಂದು ವಾರದ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ಪಡೆದರು. ಹೆಚ್ಚುವರಿಯಾಗಿ, ಭಾಗವಹಿಸಿದ ಎಲ್ಲರಿಗೂ ಪಂಚಕರ್ಮ ಚಿಕಿತ್ಸೆಗಳ ಮೇಲೆ 10% ರಿಯಾಯಿತಿಯನ್ನು ನೀಡಲಾಯಿತು.

ಡಾ. ಸುದರ್ಶನ್ ಚೆರಾಲ್, ಡಾ. ಶಿಲ್ಪಾ ರಾಮದಾಸ್, ಡಾ. ಸಿಂಧು ಸ್ಮಿತಾ ಶಿಬಿರದಲ್ಲಿ ಭಾಗವಹಿಸಿ ಜನರಿಗೆ ಉಚಿತ ಚಿಕಿತ್ಸೆ ನೀಡಿದರು. ಈಝೀ ಆಯುರ್ವೇದ ಆಸ್ಪತ್ರೆ ಆಡಳಿತವು ಎಲ್ಲಾ ಅತಿಥಿಗಳು, ಶಿಬಿರಾರ್ಥಿಗಳು, ಆಯುರ್ವೇದ ಔಷಧ ಕಂಪನಿಗಳು ಮತ್ತು ಸಿಬ್ಬಂದಿಗಳಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತದೆ ಮತ್ತು ಸಂಸ್ಥೆಯು ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳ ಮೂಲಕ ಸಮುದಾಯ ಯೋಗಕ್ಷೇಮವನ್ನು ಅಭಿವೃದ್ಧಿಗೊಳಿಸುವಲ್ಲಿ ಹೆಜ್ಜೆಯನ್ನಿಡಲಿದೆ ಎಂಬುವುದನ್ನು ಈ ಮೂಲಕ ತಿಳಿಸುತ್ತದೆ.

ಆಸ್ಪತ್ರೆಯ ವಿಳಾಸ:
ಈಸಿ ಆಯುರ್ವೇದ ಆಸ್ಪತ್ರೆ
ಎಂಫಸಿಸ್ ಪಕ್ಕದಲ್ಲಿ, ಮಾರ್ಗನ್ಸ್ ಗೇಟ್ ರಸ್ತೆ,
ಜೆಪ್ಪು, ಬೋಳಾರ್, ಮಂಗಳೂರು – 575001
ಸಂಪರ್ಕ ಸಂಖ್ಯೆ: +91 8867385567

Share Information
Continue Reading
Advertisement
Click to comment

Leave a Reply

Your email address will not be published. Required fields are marked *