Connect with us

LATEST NEWS

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ.

Mangalore-Airport-658x370ಮಂಗಳೂರು ಜುಲೈ 16 :  ದುಬೈ ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ  ಏರ್ ಇಂಡಿಯಾ ವಿಮಾನ ವಿಮಾನವು ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್ ವೇ ಪಕ್ಕದಲ್ಲಿ ಆಳವಡಿಸಿದ್ದ ಮಾರ್ಗದರ್ಶಿ ದ್ವೀಪಗಳಿಗೆ ಡಿಕ್ಕಿ ಹೊಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರು ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು ಏರ್ ಇಂಡಿಯಾ  IX 814 ವಿಮಾನ  ಇಂದು ಮುಂಜಾನೆ ದುಬೈ ನಿಂದ ಮಂಗಳೂರಿಗೆ ಆಗಮಿಸಿತ್ತು. ವಿಮಾನದಲ್ಲಿ 186 ಪ್ರಯಾಣಿಕರನ್ನು ಹೊತ್ತು ವಿಮಾನವು ರನ್ ವೇ ನಲ್ಲಿ ಇಳಿಯುತ್ತಿದ್ದಂತೆ  ರನ್ ವೇ ಪಕ್ಕದಲ್ಲಿದ್ದ ಗೈಡಿಂಗ್ ಲೈಟ್ಸ್ ಗಳಿಗೆ ಡಿಕ್ಕಿ ಹೊಡೆದಿದೆ. ಅದೃಷ್ಠವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ವಿಮಾನದಲ್ಲಿದ್ದ ಎಲ್ಲಾ 186 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಪ್ರಯಾಣಿಕರು ಇಳಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಹಾನಿಗೀಡಾದ ಗೈಡಿಂಗ್ ಲೈಟ್ಸ್ ಗಳನ್ನು ಬದಲಿಸಲಾಗಿದ್ದು ಹೊಸ ದೀಪಗಳನ್ನು ಆಳವಡಿಸಲಾಗಿದೆ. ಈ ಬಗ್ಗೆ ಏರ್ ಇಂಡಿಯಾ ಸುರಕ್ಷಾ ವಿಭಾಗವು ತನಿಖೆಯನ್ನು ನಡೆಸುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *