LATEST NEWS
ಚಾವಣೆಗೆ ಶೀಟ್ ಆಳವಡಿಸುವ ವೇಳೆ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು…!!
ಮಂಗಳೂರು ಜುಲೈ 20: ಕಟ್ಟಡದ ಚಾವಣಿಗೆ ಶೀಟ್ ಆಳವಡಿಸುವ ವೇಳೆ ಕೆಳಕ್ಕೆ ಬಿದ್ದು ಕಾರ್ಮಿಕನೊರ್ವ ಸಾವನಪ್ಪಿರುವ ಘಟನೆ ಬಾರೆಬೈಲಿನ ಅಗ್ನಿ ಶಾಮಕ ಠಾಣೆಯಲ್ಲಿ ನಡೆದಿದೆ.
ಮೃತರನ್ನು ಬಂಟ್ವಾಳದ ಅಮ್ಮಂಜೆಯ ದೀಪಕ್ (29 ವರ್ಷ) ಎಂದು ಗುರುತಿಸಲಾಗಿದೆ. ದೀಪಕ್ ಅವರು ಗುತ್ತಿಗೆದಾರ ಪ್ರವೀಣ್ ಎಂಬವರ ಜೊತೆ 8 ವರ್ಷಗಳಿಂದ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಅವರು ಚಾವಣಿಯ ಶೀಟ್ ಅಳವಡಿಸುವಾಗ ಆಯತಪ್ಪಿ ಸುಮಾರು 30 ಅಡಿ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಏಟಾಗಿತ್ತು. ಅವರನ್ನು ಅಲ್ಲಿದ್ದ ಕಾರ್ಮಿಕರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೂಡಲೇ ವಾಹನದಲ್ಲಿ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಕೆಲಸ ಮಾಡಿಸುವಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಬಗ್ಗೆ ಗುತ್ತಿಗೆದಾರ ಪ್ರವೀಣ್ ಮತ್ತು ನಿರ್ಮಿತಿ ಕೇಂದ್ರದ ಎಂಜಿನಿಯರ್ ನವೀತ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.
You must be logged in to post a comment Login