Connect with us

    LATEST NEWS

    ರಾಮಭಕ್ತರು ಮಾಡುವ ಕೆಲಸ ಇದೇನಾ – ಮಾಜಿ ಸಂಸದ ಧ್ರುವ ನಾರಾಯಣ್

    ಉಡುಪಿ ಮಾರ್ಚ್ 7:ರಾಮನ ಭಕ್ತರು ಎಂದು ಹೇಳುವ ಬಿಜೆಪಿಯವರು ಮಾಡುವ ಕೆಲಸ ಇದೇನಾ ಎಂದು ಮಾಜಿ ಸಂಸದ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಆರ್ ಧ್ರುವ ನಾರಾಯಣ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.


    ರಮೇಶ್ ಜಾರಕಿಹೋಳಿ ಸಿಡಿ ಸ್ಪೋಟ ಮತ್ತು ರಾಜ್ಯ ಸರಕಾರದ ಆರು ಜನ ಸಚಿವರು ಕೋರ್ಟ್ ಮೊರೆ ಹೋದ ವಿಚಾರಕ್ಕೆ ಮಾಜಿ ಸಂಸದ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಆರ್ ಧ್ರುವ ನಾರಾಯಣ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರುಗಳಿಂದ ರಾಜ್ಯದ ಜನ ತಲೆತಗ್ಗಿಸುವಂತಾಗಿದೆ.

    ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಕೋತೀರಿ? ಪಾರ್ಟಿ ವಿದ್ ಡಿಫರೆನ್ಸ್ ಅಂದ್ರೆ ಇದೇನಾ? ರಾಮಭಕ್ತರು ಮಾಡುವ ಕೆಲಸಾನಾ ಇದು ಎಂದು ಪ್ರಶ್ನಿಸಿದರು. ಬಸವಣ್ಣ, ಕುವೆಂಪು ನಾಡಲ್ಲಿ ಇದು ನಾಚಿಕೆಗೇಡಿನ ಬೆಳವಣಿಗೆ. ಸಿಡಿ ಸ್ಫೋಟದ ಹಿಂದೆ ಕಾಂಗ್ರೆಸ್‌ ನ ಷಡ್ಯಂತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಹಿತ ಕಾಪಾಡುವಲ್ಲಿ 25 ಸಂಸದರು ಸೋತಿದ್ದಾರೆ. ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ , ಎರಡು ವರ್ಷದಲ್ಲಿ ಏನೂ ಅಭಿವೃದ್ಧಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply