Connect with us

BELTHANGADI

ರೆಡ್ ಲೈಟ್ ಏರಿಯಾದ ಮಾಲಕರಿಂದಲೇ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸುತ್ತಾರೆ- ಗಂಗಾಧರ ಗೌಡ

ರೆಡ್ ಲೈಟ್ ಏರಿಯಾದ ಮಾಲಕರಿಂದಲೇ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸುತ್ತಾರೆ- ಗಂಗಾಧರ ಗೌಡ

ಮಂಗಳೂರು ಮೇ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ತಮ್ಮ ಮಗನಿಗೆ ವಿಧಾನಸಭೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಮುನಿಸಿಕೊಂಡ ಬೆಳ್ತಂಗಡಿ ಬಿಜೆಪಿ ಮುಖಂಡ ಮಾಜಿ ಸಚಿವ ಗಂಗಾಧರ ಗೌಡ ಇಂದು ಕಾಂಗ್ರೇಸ್ ಸೇರ್ಪಡೆಗೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖ ದಲ್ಲಿ ಕಾಂಗ್ರೆಸ್ ಗೆ ಗಂಗಾಧರ್‌ ಗೌಡ ಅಧಿಕೃತವಾಗಿ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಗಂಗಾಧರ ಗೌಡ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ವಿರುದ್ಧ ವಾಗ್ದಾಳಿ ನಡೆಸಿದರು.
ಕೆ ಪಿ ಎಸ್ ಸಿ ಹಗರಣದಲ್ಲಿ ಹರೀಶ ಪೂಂಜಾ ಪಾಲು ಪಡೆದಿದ್ದಾರೆ, ಕೆ ಪಿ ಎಸ್ ಸಿ ಏಜೆಂಟ್ ಆಗಿ ಕೋಟ್ಯಂತರ ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಕಿಡಿಕಾರಿದರು. ಈ ಕೆ ಪಿ ಎಸ್ ಸಿ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ಮಾಡಿದೆ . ಸೂಕ್ತ ತನಿಖೆ ನಡೆದರೆ ಹರೀಶ ಪೂಂಜಾ ಜೈಲು ಸೇರಲಿದ್ದಾನೆ ಎಂದರು.

ನಾಯಿಗೆ ವಾಸನೆ ಸಿಕ್ಕಿದಂತೆ ಹಣವಿದ್ದಲ್ಲಿ ಆತನಿಗೆ ವಾಸನೆ ಸಿಗುತ್ತದೆ. ಇಂತಹ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟು ಯಾವ ಸಾಧನೆ ಮಾಡಿದೆ . ಜನ ಇಷ್ಟು ಕೀಳುಮಟ್ಟದ ರಾಜಕೀಯ ನಡೆಸುತ್ತಾರೆ ಎಂದೆನಿಸಿರಲಿಲ್ಲ. ರೆಡ್ ಲೈಟ್ ಏರಿಯಾದ ಮಾಲಕರಿಂದಲೇ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸುತ್ತಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಪ್ರಭಾಕರ ಬಂಗೇರರಿಗೆ ಟಿಕೆಟ್ ನೀಡಬಹುದಿತ್ತಾದರೂ, 420 ವ್ಯಕ್ತತ್ವದವನಿಗೆ ಟಿಕೆಟ್ ನೀಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸಿದ್ಧರಾಮಯ್ಯ ಆಡಳಿತ ವಿರುದ್ಧ ಮಾತನಾಡುವವರು ಎಷ್ಟು ಉತ್ತಮ ಆಡಳಿತ ನೀಡಿದ್ದಾರೆ ? ಮೌಲ್ಯವಿಲ್ಲದ ರಾಜಕೀಯ ಮಾಡಿ, ಕೆಟ್ಟಚಾಳಿ ಹೊಂದಿರುವವರು ಬಿಜೆಪಿಯವರು. ಇವೆಲ್ಲವನ್ನೂ ನಾನು ಹತ್ತಿರ ದಿಂದ ಕಂಡಿದ್ದೇನೆ. ಮೂರ್ಖ ಶಿಖಾಮಣಿಗಳಿಗೆ ಶ್ರೇಷ್ಠವಾದ ಮತದಾನ ಮಾಡಬಾರದು.

ಇವರಿಗೆ ಮತನೀಡಿದರೆ ಮಗಳನ್ನು ಒಬ್ಬ ಪೋಲಿಗೆ ಮದುವೆ ಮಾಡಿಕೊಟ್ಟಂತೆ. ಬೆಳ್ತಂಗಡಿಗಲ್ಲಿ ಬಿಜೆಪಿ ಗೆದ್ದರೆ ಮರ್ಯಾದಸ್ತರು ಬದುಕಲು ಕಷ್ಟವಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಗಂಗಾಧರ್ ಗೌಡ್ ಅವರ ಪುತ್ರ ರಂಜನ್ ಗೌಡ್ ಕೂಡ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *