DAKSHINA KANNADA
ಕಾಡಾನೆ ದಾಳಿಗೆ ಓರ್ವನ ಬಲಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕಾಡಾನೆ ದಾಳಿಗೆ ಓರ್ವನ ಬಲಿ
ಪುತ್ತೂರು ಮಾರ್ಚ್ 7: ಕಾಡಾನೆ ದಾಳಿ ಓರ್ವ ವ್ಯಕ್ತಿ ಬಲಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ, ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ತಮಿಳುನಾಡಿನ ಮದುರೈ ಮೂಲದ ರಂಜಿತ್ ಎಂದು ಗುರುತಿಸಲಾಗಿದೆ.
ರೈಲ್ವೆ ಸೇತುವೆ ದುರಸ್ಥಿ ಕಾರ್ಯಕ್ಕೆ ಬಂದಿದ್ದ ಕಾರ್ಮಿಕರು ರೈಲ್ವೆ ಹಳಿ ಪಕ್ಕ ಟೆಂಟ್ ಹಾಕಿ ಮಲಗಿದ್ದರು. ಇವರ ಕಾಡಾನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಸಾವನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅನೆ ದಾಳಿಗೀಡಾದವರು ತಮಿಳುನಾಡಿನ ಮದುರೈ ಮೂಲದವರು ಎಂದು ಹೇಳಲಾಗಿದೆ. ಗಾಯಗೊಂಡ ಲಕ್ಷಣ್ ಮತ್ತು ಷಣ್ಮುಗಂ ಗೆ ಕಡಬ ಸರಕಾರಿ ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login