DAKSHINA KANNADA
ಕಾಡಾನೆ ದಾಳಿಗೆ ಓರ್ವನ ಬಲಿ
ಕಾಡಾನೆ ದಾಳಿಗೆ ಓರ್ವನ ಬಲಿ
ಪುತ್ತೂರು ಮಾರ್ಚ್ 7: ಕಾಡಾನೆ ದಾಳಿ ಓರ್ವ ವ್ಯಕ್ತಿ ಬಲಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ, ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ತಮಿಳುನಾಡಿನ ಮದುರೈ ಮೂಲದ ರಂಜಿತ್ ಎಂದು ಗುರುತಿಸಲಾಗಿದೆ.
ರೈಲ್ವೆ ಸೇತುವೆ ದುರಸ್ಥಿ ಕಾರ್ಯಕ್ಕೆ ಬಂದಿದ್ದ ಕಾರ್ಮಿಕರು ರೈಲ್ವೆ ಹಳಿ ಪಕ್ಕ ಟೆಂಟ್ ಹಾಕಿ ಮಲಗಿದ್ದರು. ಇವರ ಕಾಡಾನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಸಾವನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅನೆ ದಾಳಿಗೀಡಾದವರು ತಮಿಳುನಾಡಿನ ಮದುರೈ ಮೂಲದವರು ಎಂದು ಹೇಳಲಾಗಿದೆ. ಗಾಯಗೊಂಡ ಲಕ್ಷಣ್ ಮತ್ತು ಷಣ್ಮುಗಂ ಗೆ ಕಡಬ ಸರಕಾರಿ ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
You must be logged in to post a comment Login