LATEST NEWS
ಕಟೀಲು ದೇವಳದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಚಿಂತನೆ
ಮಂಗಳೂರು ಅಕ್ಟೋಬರ್ 05: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಭಾನುವಾರ ಬ್ಯಾನರ್ ಆಳವಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಭಕ್ತರು ಅಶ್ಲೀಲ ರೀತಿಯ ಬಟ್ಟೆ ಹಾಕಿ ದೇವಸ್ಥಾನಕ್ಕೆ ಆಗಮಿಸುತ್ತಿರುವುದು ಹೆಚ್ಚಾಗಿದ್ದು, ಈ ಹಿನ್ನಲೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯ ಹೇರಿದ್ದವು. ಅಲ್ಲದೆ ಇತ್ತೀಚೆಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಬ್ಯಾನರ್ ಆಳವಡಿಸಲಾಗಿತ್ತು, ಇದೀಗ ಕಟೀಲಿನಲ್ಲಿ ಇದೇ ರೀತಿ ಬ್ಯಾನರ್ ಆಳವಡಿಸಲಾಗಿದೆ.
ಈ ಬ್ಯಾನರ್ ನಲ್ಲಿ ಹಿಂದೂ ಸಂಪ್ರದಾಯಿಕ ಬಟ್ಟೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ದೇವಾಲಯದ ವತಿಯಿಂದ ವಿನಂತಿಸಲಾಗಿದೆ. ಆದರೆ ಸದ್ಯ ಯಾವುದೇ ಬಟ್ಟೆ ತೊಟ್ಟು ಬಂದರೂ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ ಇಲ್ಲ. ಆದರೆ ವಸ್ತ್ರ ಸಂಹಿತೆಯನ್ನು ಹಂತ ಹಂತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.
You must be logged in to post a comment Login