Connect with us

    BELTHANGADI

    ದಿಗಂಬರ ಮುನಿಗಳ ಹತ್ಯೆ ಇತಿಹಾಸದಲ್ಲೇ ಮೊದಲು – ಡಾ. ಡಿ ವಿರೇಂದ್ರ ಹೆಗ್ಗಡೆ

    ಬೆಳ್ತಂಗಡಿ ಜುಲೈ 08:ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರು ಖಂಡಿಸಿದ್ದು, ದಿಗಂಬರ ಮುನಿಗಳನ್ನು ಈ ರೀತಿಯಾಗಿ ಹತ್ಯೆ ಮಾಡಿದ್ದು ಇತಿಹಾಸದಲ್ಲೇ ಮೊದಲು ಎಂದಿದ್ದಾರೆ.


    ಈ ಬಗ್ಗೆ ಮಾತನಾಡಿದ ಅವರು ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾಗಿದ್ದು, ಮನಸ್ಸಿಗೆ ತುಂಬಾ ನೋವಾಗಿದೆ.  ಅನೇಕ ಉಪಸರ್ಗಗಳು ಎಂದು ಜೈನಧರ್ಮದಲ್ಲಿ ಹೇಳುತ್ತಾರೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಅಥವಾ ತಪ್ಪುಗಳಿದ್ದೆ ಅದಕ್ಕೆ ಅನೇಕ ರೀತಿಯ ಉಪಸರ್ಗಗಳನ್ನ ಅನುಭವಿಸಬೇಕಾಗುತ್ತದೆ. ಆದರೆ ಕಾಮಕುಮಾರ ಜೈನಮುನಿಗೆ ಯಾವ ಕಾರಣಕ್ಕಾಗಿ ಸಿಕ್ಕ ಉಪಸರ್ಗ ಎಂದು ತಿಳಿಯುತ್ತಿಲ್ಲ ಎಂದು ಡಾ. ಡಿ ವಿರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ. ದಿಗಂಬರ ಮುನಿಗಳನ್ನು ಈ ರೀತಿಯಾಗಿ ಹತ್ಯೆ ಮಾಡಿದ್ದು ಇತಿಹಾಸದಲ್ಲೇ ಮೊದಲು, ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.

    ಕೊಲೆ ಮಾಡಿದವರು ಈಗಾಗಲೇ ಪತ್ತೆಯಾಗಿದ್ದು, ಪೊಲೀಸ್ ಇಲಾಖೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply