DAKSHINA KANNADA
ಮಕ್ಕಾ-ಮದೀನಾ ವಿರುದ್ಧ ಅವಹೇಳನ,ಮುಸ್ಲೀಂ ಸಂಘಟನೆಗಳ ಅಕ್ರೋಶ
ಮಕ್ಕಾ-ಮದೀನಾ ವಿರುದ್ಧ ಅವಹೇಳನ,ಮುಸ್ಲೀಂ ಸಂಘಟನೆಗಳ ಅಕ್ರೋಶ
ಪುತ್ತೂರು, ಅಕ್ಟೋಬರ್ 22 : ಪವಿತ್ರ ಕ್ಷೇತ್ರವಾದ ಮಕ್ಕಾ-ಮದೀನಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿದೆ. ಇದು ಮುಸ್ಲೀಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತರೂರು ತಾಲೂಕಿನ ಕಡಬ ಕುದ್ಕೋಳಿ ನಿವಾಸಿ ಹಾಗೂ ಮೊಬೈಲ್ ಸೆಂಟರ್ ಮಾಲಕ ಪ್ರದೀಪ್ ಎಂಬಾತನೇ ಈ ಆರೋಪಕ್ಕೆ ಗುರಿಯಾದ ವ್ಯಕ್ತಿ.
ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರವಾಗ ಮೆಕ್ಕಾದ ಮಸೀದಿ ಮೇಲೆ ಹಿಂದೂ ದೇವರಾದ ಹನುಮಂತ ನ ಚಿತ್ರ ಪ್ರಕಟಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಗರಂ ಆಗಿವೆ. ಇದರಿಂದ ಮುಸ್ಲಿಂ ಧರ್ಮದ ಅವಹೇಳನವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟನೆಯನ್ನು ನಡೆಸಿದುವು. ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಮಧ್ಯಾಹ್ನದ ಒಳಗೆ ಆರೋಪಿಯನ್ನು ಬಂಧಿಸದೇ ಹೋದಲ್ಲಿ ಕಡಬ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿದೆ.
You must be logged in to post a comment Login