Connect with us

    LATEST NEWS

    ಬುದ್ದಿವಂತರ ಜಿಲ್ಲೆಯಲ್ಲೇ ಹೆಚ್ಚಾದ ಡಿಜಿಟಲ್ ಅರೆಸ್ಟ್ ಪ್ರಕರಣ – ಮುಂಬೈ ಪೊಲೀಸರ ಹೆಸರಿನಲ್ಲಿ 50 ಲಕ್ಷ ಹಣ ವಂಚನೆ

    ಮಂಗಳೂರು ಅಕ್ಟೋಬರ್ 27: ಬುದ್ದಿವಂತರ ಜಿಲ್ಲೆಯೆಂದು ಕರೆಯುವ ದಕ್ಷಿಣಕನ್ನಡ ಜಿಲ್ಲೆಯಲ್ಲೇ ಸೈಬರ್ ಕ್ರೈಂ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಅಕ್ರಮ ಜಾಹೀರಾತು ನೀಡಿದ್ದಾರೆ ಎಂದು ಹೇಳಿ ನಕಲಿ ಸಿಬಿಐ ಹೆಸರಿನಲ್ಲಿ ₹ 50 ಲಕ್ಷ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ದೂರಿನ ಪ್ರಕಾರ ಅಕ್ಟೊಬರ 11ರಂದು ಮಧ್ಯಾಹ್ನ3 ಗಂಟೆಗೆ ನನ್ನ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ ತನ್ನನ್ನು ಮಹಾರಾಷ್ಟ್ರದ ಅಗ್ರಿಪಥ ಪೊಲೀಸ್ ಠಾಣೆಯ ಎಸ್.ಐ ವಿನಯ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ನನ್ನ ಮೊಬೈಲ್‌ನಿಂದ ಅಕ್ರಮ ಜಾಹಿರಾತು ನೀಡಿ ಕಿರುಕುಳ ನೀಡಿದ ಬಗ್ಗೆ ಪ್ರಕರಣದ ದಾಖಲಾಗಿದ್ದು, ವಿಚಾರಣೆಗೆ ಮುಂಬೈಗೆ ಬರುವಂತೆ ತಿಳಿಸಿದ. ಬರಲು ಸಾಧ್ಯವಿಲ್ಲ ಎಂದಾಗ ಮೇಲಾಧಿಕಾರಿಯವರು ಕರೆ ಮಾಡುತ್ತಾರೆ ಎಂದಿದ್ದ.

    ನಂತರ ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐನ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ. ನನ್ನ ಮೇಲೆ ಕ್ರಮ ಜಾಹೀರಾತಿನ ಪ್ರಕರಣದ ಜೊತೆ ಇನ್ನೊಂದು ಪ್ರಕರಣ ದಾಖಲಾಗಿದೆ ಎಂದಿದ್ದ. ನರೇಶ್ ಗೋಯೆಲ್ ಎಂಬುವರ ಮನೆ ಜಪ್ತಿ ಮಾಡಿದಾಗ ನನ್ನ ಎಟಿಎಮ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ಸುಮಾರು 20 ಜನರು ₹ 2 ಕೋಟಿ ಹಣವನ್ನು ಕೆನರಾ ಬ್ಯಾಂಕಿನ ಮುಂಬೈ ಖಾತೆಯಲ್ಲಿ ನನ್ನ ಹೆಸರಿನಲ್ಲಿರುವ ಖಾತೆಯ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಿಮ್ಮನ್ನು ಸಿ.ಬಿ.ಐ ಅಧಿಕಾರಿಗಳು ಬಂಧಿಸಲಿದ್ದಾರೆ. ದಾಖಾಲಾತಿಗಳೊಂದಿಗೆ ಸುಪ್ರಿಂ ಕೋರ್ಟ್‌ಗೆ ಹಾಜರಾಗಬೇಕು. ನಿಮಗೆ ಮುಂಬೈಗೆ ಬರಲು ಅಸಾಧ್ಯವಾದರೆ ಆನ್ ಲೈನ್‌ನ ತನಿಖೆಯನ್ನು ಮಾಡುತ್ತೇನೆ ಎಂದಿದ್ದ. ಮರುದಿನ ಮತ್ತೆ ಆತ ಕರೆ ಮಾಡಿ, ಬ್ಯಾಂಕಿನಲ್ಲಿ ನಾನು ಠೇವಣಿ ಇಟ್ಟ ಹಣವ ವಿವರ ಪಡೆದುಕೊಂಡ. ಎಲ್ಲಾ ಹಣವನ್ನು ಆರ್.ಬಿ.ಐ.ಗೆ ವರ್ಗಾಸಿದ್ದಾರೆ. ಮೂರು ದಿನಗಳ ಒಳಗೆ ಹಣ ವಾಪಾಸ್ ಆಗಲಿದೆ ಎಂದು ಹೇಳಿದ್ದ, ಆದರೆ ಮತ್ತೆ ಕರೆ ಮಾಡಿದಾಗ ಮತ್ತಷ್ಟು ಹಣ ವಸೂಲಿಗೆ ಇಳಿದ್ದರು. ಈ ವೇಳೆ ವಂಚನೆಯಾಗಿರುವುದು ತಿಳಿಯಿತು ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply