Connect with us

    LATEST NEWS

    ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಭೇಟಿ – ಎನ್ಎಚ್ಐ ಅಧಿಕಾರಿಗಳ ಮೇಲೆ ಗರಂ ಆದ ಜಿಲ್ಲಾಧಿಕಾರಿ

    ಮಂಗಳೂರು ಜುಲೈ 28: ರಸ್ತೆ ನಿರ್ಮಾಣದ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಕಾರಣ ಇದೀಗ ಕುಸಿತದ ಭೀತಿಯಲ್ಲಿರುವ ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು.


    ಈ ವೇಳೆ ಸ್ಥಳದ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸ್ಥಳೀಯರೊಂದಿಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸ್ಥಳೀಯರು ಈ ಪ್ರದೇಶದಿಂದ ಮಣ್ಣನ್ನು ಬೇಕಾಬಿಟ್ಟಿ ತೆಗಯುತ್ತಿದ್ದಾರೆ ಎಂದು ಆರೋಪಿಸಿದರು.


    ಬಳಿಕ ಈ ಜಾಗದಲ್ಲಿ ಕುಸಿತದ ಕಾರಣ ಮತ್ತು ಪರಿಹಾರದ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಶಿರೂರಿಗೆ ಬಂದ ನುರಿತ ತಜ್ಞರ ತಂಡದ ಮೂಲಕ ಈ ಪ್ರದೇಶದಲ್ಲಿ ಪರೀಶಿಲನೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

    ಈ ವೇಳೆ ಈ ಕುಸಿತಕ್ಕೆ ಸರಿಯಾದ ಕಾರಣ ಕೊಡಲು ಒದ್ದಾಡಿದ ಎನ್ಎಚ್ಐ ಅಧಿಕಾರಿಗಳ ಜಿಲ್ಲಾಧಿಕಾರಿ ಗರಂ ಕೂಡ ಆದರು. ಮನಪ ಇಲಾಖೆ ಈ‌ ಭಾಗದ ಸಮಗ್ರ ತನಿಖಾ ವರದಿ ನೀಡಲು ಸೂಚನೆ. ಈ ವೇಳೆ ಮಂಗಳೂರು ಎಸಿ ಹರ್ಷವರ್ಧನ್, ಮನಪ ಉಪ ಆಯುಕ್ತ, ಇಂಜಿನಿಯರ್ ಎನ್ಎಚ್ಐ ಅಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply