LATEST NEWS
ಉತ್ತರ ಪ್ರದೇಶದಲ್ಲಿ ವೈದ್ಯನ ಹತ್ಯೆ ಆರೋಪಿ ಶಾರ್ಪ್ ಶೂಟರ್ನನ್ನು ಮುಂಬೈಯಲ್ಲಿ ಬಂಧಿಸಿದ ದಯಾ ನಾಯಕ್ ತಂಡ.!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮುಂಬಯಿ : ಉತ್ತರ ಪ್ರದೇಶದ ಜಲಾಲ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡು ಹಾರಿಸಿ ವೈದ್ಯರೋಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಮುಂಬಯಿ ಬಾಂದ್ರಾ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ದಯಾ ನಾಯಕ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಗೇಶಕುಮಾರ ಸಂಗ್ರಾಮ್ ಯಾದವ್ ಬಂಧಿತ ಆರೋಪಿಯಾಗಿದ್ದು ಆತನ ಬಳಿ ಇದ್ದ ಪಿಸ್ತೂಲ್ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಜಲಾಲ್ಪುರ ಪೊಲೀಸ್ ಠಾಣೆಯಲ್ಲಿ ಒಬ್ಬ ವೈದ್ಯನ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣದ ಶೂಟರ್ಗೆ ಮುಂಬೈಗೆ ಬರುತ್ತಿರುವ ಖಚಿತ ಮಾಹಿತಿ ಆಧಾರಿಸಿ ಪಶ್ಚಿಮ ಬಾಂದ್ರಾದ ಮುಂಬೈನ ಹೋಟೆಲ್ ರಂಗಶಾರದ ಬಳಿ ಆಪ್ಕೋ ಕನ್ಸ್ಟ್ರಕ್ಷನ್ ಸೈಟ್ ಎದುರು ಬಲೆ ಬೀಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಆರೋಪಿಯೊಂದಿಗೆ ಒಂದು ಸ್ಟೇನ್ಲೆಸ್ ಸ್ಟೀಲ್ ದೇಸಿ ಪಿಸ್ತೂಲ್ ಮತ್ತು ಮೂರು ಲೈವ್ ಕಾರ್ಟ್ರಿಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಸಂಗ್ರಾಮ್ ಯಾದವ್ ಉತ್ತರ ಪ್ರದೇಶದ ಜಲಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವೈದ್ಯನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಲ್ಲಿನ ಪೋಲಿಸರಿಗೆ ಬೇಕಾಗಿದ್ದ ಮತ್ತು ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಲೆಯಾದ ವೈದ್ಯನ ಮೇಲೆ 3 ಸುತ್ತು ಗುಂಡು ಹಾರಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿ ದಯಾ ನಾಯಕ್ ಮಾಹಿತಿ ನೀಡಿದ್ದಾರೆ.
You must be logged in to post a comment Login