Connect with us

JYOTHISHYA

ರಾಶಿ ಭವಿಷ್ಯ ಶನಿವಾರ | ಆಗಸ್ಟ್​1, 2020

ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

 

ಶನಿವಾರ ರಾಶಿ ಫಲ : ಯಾರಿಗೆ ಶುಭದಿನ

 

ಮೇಷ

ಮೇಷ : ಜ್ವರಾದಿ ಶೀತ ಬಾಧೆಗಳು ಪ್ರಾಯದವರನ್ನು ಕಂಗೆಡಿಸಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಭಡ್ತಿ ತಡೆಹಿಡಿದಿತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಸಂತಾನ ಯೋಗವಿದೆ.

ವೃಷಭ

ವೃಷಭ : ಉನ್ನತ ವ್ಯಾಸಂಗಕ್ಕಾಗಿ ಧನ ವಿನಿಯೋಗವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚು ವೆಚ್ಚ ಹೆಚ್ಚಲಿದೆ.

ಮಿಥುನ

ಮಿಥುನ : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ವೆಚ್ಚ ತಂದೀತು. ಶುಭಕಾರ್ಯಗಳಿಗೆ ಅಡೆ ತಡೆಗಳು ಬಂದಾವು. ಚಿಂತೆಯನ್ನು ದೂರ ಮಾಡಲು ವ್ಯಸನದ ದಾಸರಾಗದಿರಿ ಜೋಕೆ. ಮಹಾತ್ಕಾರ್ಯ ಸಾಧನೆಗೆ ಧನಹಾನಿಯಾದೀತು.

ಕರ್ಕ

ಕರ್ಕ : ಪರದೇಶದ ಕಾರ್ಯಗಳಿಗಾಗಿ ನಿರುದ್ಯೋಗಿಗಳಿಗೆ ಕರೆ ಬರಲಿದೆ.ಆರೋಗ್ಯವು ಹದಗೆಟ್ಟು ಸಮಸ್ಯೆ ತಂದೀತು. ದುಡುಕು ವರ್ತನೆಯಿಂದ ಕಾರ್ಯಹಾನೀಯಾದೀತು. ನಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಲಿದೆ.

ಸಿಂಹ

ಸಿಂಹ : ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿದೆ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಅಗತ್ಯವಿದೆ. ಜೀರ್ಣಕ್ರಿಯೆಯಲ್ಲಿ ಉಷ್ಣವಾಯು ದೋಷವು ಬಾಧೆ ಕೊಡಲಿದೆ. ಅವಶ್ಯಕ ಕಾರ್ಯವು ಅಡೆತಡೆಯಿಂದ ನಡೆಯಲಿದೆ.

ಕನ್ಯಾ

ಕನ್ಯಾ : ಹಿರಿಯರಿಗೆ ಆಪತ್ತು ಕಾಣಿಸಲಿದೆ. ಹಣಕ್ಕಾಗಿ ಅಲೆದಾಟವು ನಿಷ್ಪಲವೆನಿಸಲಿದೆ. ಗೌಪ್ಯ ವಿಚಾರವು ಬಹಿರಂಗವಾಗಿ ರಾದ್ಧಾಂತವಾದೀತು. ವಿವಾಹಿತರಿಗೆ ಸಂತತಿ ಕ್ಷೇಶ ಕಾಣಿಸಲಿದೆ. ಸರಕಾರಿ ಇಲಾಖೆಯಲ್ಲಿ ಅಪಜಯ.

ತುಲಾ

ತುಲಾ : ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸು ಕೊಂಚ ಹಗುರವೆನ್ನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿ ಮುನಿಸಿನಿಂದಾಗಿ ವಿಳಂಬವಾದೀತು. ವೈದ್ಯಕೀಯ ವೃತ್ತಿ ನಿರತರಿಗೆ ಈ ಮಾಸವು ಉತಮ ಫಲ ನೀಡಲಾರದು.

ವೃಷ್ಚಿಕ : ನಿರುದ್ಯೋಗಿಗಳಿಗೆ ಸ್ಥಾನ ಪಲ್ಲಟ ಯೋಗವಿದೆ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನವೆನ್ನಿಸಲಿದೆ. ಬಂಧು ಸಮಾಗಮ ಮಗಳ ವಿವಾಹದ ಸಮಾಲೋಚನೆ ನಡೆಯಲಿದೆ. ಶುಭವಾರ್ತೆ ಸಿಗಲಿದೆ.

ಧನು

ಧನು : ನಿರುದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಯಾರದ್ದೋ ತಪ್ಪಿಗೆ ದಂಡ ತೆರುವ ಪ್ರಸಂಗ ಬಢ್ತಿಯನ್ನ ತೆಡಹಿಡಿಯಲಿದೆ. ಭೂ ಸಂಬಂಧಿ ವ್ಯವಹಾರ ಫಲ ನೀಡಲಿದೆ.

ಮಕರ

ಮಕರ : ಬಂಡವಾಳದಲ್ಲಿ ಹಣ ನಷ್ಟವಾದೀತು. ದಂಪತಿಗಳಲ್ಲಿ ವಿರಸ ತೋರಿ ಬರಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯದ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ವಂಚನೆ ತೋರಿ ಬಂದೀತು. ಪ್ರವಾಸ ಯೋಗವಿದೆ.

ಕುಂಭ

ಕುಂಭ : ಶತ್ರುಗಳ ಬಾಧೆಯಿಂದ ಕಾರ್ಯಭಂಗವಾದೀತು. ಶುಭ ಕಾರ್ಯಗಳಿಗೆ ತಡೆ ತಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಹಿರಿಯರು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗೃತೆ.

ಮೀನ

ಮೀನ: ಹಳೇ ಬಾಕಿ ವಸೂಲಾಗಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡವಿದೆ. ದೂರ ಪ್ರಯಾಣದ ಆಯಾಸದಿಂದ ಸಮಸ್ಯೆ ಕಾಣಬಹುದು. ನ್ಯಾಯಾಲಯದ ಕೆಲಸಗಳು ನಿಮ್ಮ ಪಾಲಿಗೆ ಸುಲಭವಾಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *