DAKSHINA KANNADA
ಪೊಸ್ರಾಲು ಬಳಿ ಶಾಂಭವಿ ನದಿಯಲ್ಲಿ ಮೊಸಳೆ
ಪೊಸ್ರಾಲು ಬಳಿ ಶಾಂಭವಿ ನದಿಯಲ್ಲಿ ಮೊಸಳೆ
ಮಂಗಳೂರು ಮೇ17: ಮುಂಡ್ಕೂರು ಗ್ರಾಮದ ಪೊಸ್ರಾಲು ಬಳಿಯ ಶಾಂಭವಿ ನದಿಯಲ್ಲಿ ಮೊಸಳೆಗಳು ಕಂಡು ಬಂದಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಶಾಂಭವಿ ನದಿಗೆ ಸಂಕಲಕರಿಯದಲ್ಲಿ ಹಾಕಲಾದ ಅಣೆಕಟ್ಟಿನ ಸಮೀಪ ಈಗ ನೀರಿನ ಪ್ರಮಾಣ ಕಡಿಮೆಯಾಗಿದ್ದು ಈ ಹಿನ್ನಲೆಯಲ್ಲಿ ಮೊಸಳೆಗಳು ಸ್ಥಳೀಯರಿಗೆ ಕಾಣಸಿಕ್ಕಿವೆ.
ಈ ಹಿನ್ನಲೆಯಲ್ಲಿ ಪರಿಸರದ ಜನರು ಭಯಭೀತರಾಗಿದ್ದಾರೆ. ಇಲ್ಲಿನ ಕೃಷಿಕರು ವ್ಯವಸಾಯಕ್ಕಾಗಿ ಶಾಂಭವಿ ನದಿಯ ನೀರನ್ನು ಅವಲಂಬಿಸಿದ್ದು, ಗದ್ದೆಗೆ ಪಂಪು ನೀರು ಹಾಯಿಸಲು ನದಿಗೆ ಹೋದ ಸಂದರ್ಭ ಮೊಸಳೆಗಳನ್ನು ಕಂಡಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ಕಾಣಿಸದ ಮೊಸಳೆಗಳು ನದಿಗೆ ಹೇಗೆ ಬಂದವು ಎಂಬ ಬಗ್ಗೆ ಜನರಲ್ಲಿ ಸಂಶಯ ಮೂಡಿದೆ. ಈ ಭಾಗದ ಜನರು ಬಟ್ಟೆ ಒಗೆಯಲು, ದನ ತೊಳೆಯಲು ಅದಲ್ಲದೆ ಮಕ್ಕಳು ಈಜಾಡಲು ನದಿಗೆ ಬರುತ್ತಿದ್ದು ಅಪ್ಪಿತಪ್ಪಿ ನೀರಿಗಿಳಿದರೆ ಮೊಸಳೆಗಳಿಗೆ ಆಹಾರವಾಗುವ ಸಾಧ್ಯತೆ ಇದ್ದು ತತ್ ಕ್ಷಣವೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮೊಸಳೆಗಳನ್ನು ಹಿಡಿದು ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ.
You must be logged in to post a comment Login