LATEST NEWS
ಹುಸೇನಬ್ಬ ಪ್ರಕರಣ – ಹೆಡ್ ಕಾನ್ ಸ್ಟೇಬಲ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ಹುಸೇನಬ್ಬ ಪ್ರಕರಣ – ಹೆಡ್ ಕಾನ್ ಸ್ಟೇಬಲ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ಉಡುಪಿ ಜೂನ್ 7: ಪೆರ್ಡೂರು ಶೇನರಬೆಟ್ಟುವಿನಲ್ಲಿ ನಡೆದ ದನದ ವ್ಯಾಪಾರಿ ಹುಸೇನಬ್ಬ ಸಾವಿಗೆ ಸಂಬಂಧಿಸಿ ಬಂಧಿತ ಆರೋಪಿ ಹೆಡ್ ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.
ಹಿರಿಯಡ್ಕ ಠಾಣೆಯ ಹೆಡ್ ಕಾನ್ ಸ್ಟೇಬಲ್ ಜಾಮೀನು ಅರ್ಜಿಯನ್ನು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಿರಸ್ಕರಿಸಿದೆ.
ಹುಸೇನಬ್ಬ ಸಾವಿಗೆ ಸಂಬಂಧಿಸಿ ಆರೋಪಿಗಳಿಗೆ ಸಹಕಾರ ಮಾಡಿದ ಆರೋಪದ ಮೇಲೆ ಹಿರಿಯಡ್ಕ ಎಸ್ಸೈ, ಹೆಡ್ ಕಾನ್ ಸ್ಟೇಬಲ್ ಮತ್ತು ಜೀಪು ಚಾಲಕ ಸದ್ಯ ಜೈಲಿನಲ್ಲಿದ್ದಾರೆ.
ಹಿರಿಯಡ್ಕ ಎಸ್ಸೈ ಡಿ.ಎನ್ ಕುಮಾರ್ ಜೀಪು ಚಾಲಕ ಗೋಪಾಲ್ ಸಲ್ಲಿಸಿರುವ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.
ದನದ ವ್ಯಾಪಾರಿ ಅಸಹಜ ಸಾವಿಗೆ ಸಂಬಂಧಿಸಿ ಮೂವರು ಪೊಲೀಸರು ಮತ್ತು ಏಳು ಮಂದಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.
You must be logged in to post a comment Login