LATEST NEWS
ಕಾರ್ಕಳ – ಐಷಾರಾಮಿ ಕಾರಿನಲ್ಲಿ ಬೀಡಾಡಿ ದನಕಳ್ಳತನದ ಸಿಸಿಟಿವಿ ವಿಡಿಯೋ
ಕಾರ್ಕಳ : ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಗೋಹತ್ಯೆ ಕಾನೂನು ಬಂದ ನಂತರವೂ ಉಡುಪಿಯಲ್ಲಿ ಗೋಕಳ್ಳರ ಅಟ್ಟಹಾಸ ಮುಂದುವರೆದಿದೆ.
ಕಾರ್ಕಳದ ಸಾಲ್ಮರ ಪ್ರದೇಶದಲ್ಲಿ ಗೋ ಕಳ್ಳರ ಕರಾಮತ್ತು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಐಷಾರಾಮಿ ಕಾರಿನಲ್ಲಿ ಆಗಮಿಸುವ ಕಳ್ಳರು ರಸ್ತೆಯಲ್ಲಿರುವ ಬಿಡಾಡಿ ದನಗಳನ್ನು ಹಿಡಿದು ಕಾರಿಗೆ ತುಂಬಿಸಿ ಪರಾರಿಯಾಗಿದ್ದಾರೆ.
ಈ ಘಟನೆ ನಿನ್ನೆ ರಾತ್ರಿ ಸುಮಾರು 2.30ಕ್ಕೆ ನಡೆದಿದೆ ಎಂದು ಹೇಳಲಾಗಿದ್ದು, ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ದನಗಳನ್ನು ಕಳ್ಳತನ ಮಾಡುತ್ತಿರುವ ಗೋಕಳ್ಳರು ಈಗ ಬೀಡಾಡಿ ದನಗಳನ್ನು ಟಾರ್ಗೆಟ್ ಮಾಡಿದ್ದಾರೆ.
You must be logged in to post a comment Login