Connect with us

    LATEST NEWS

    ಉಸ್ತುವಾರಿ ಸಚಿವೆ ಜಯಮಾಲಾಗೆ ಕಾಂಗ್ರೇಸ್ ಕಾರ್ಯಕರ್ತರಿಂದ ಮುತ್ತಿಗೆ

    ಉಸ್ತುವಾರಿ ಸಚಿವೆ ಜಯಮಾಲಾಗೆ ಕಾಂಗ್ರೇಸ್ ಕಾರ್ಯಕರ್ತರಿಂದ ಮುತ್ತಿಗೆ

    ಉಡುಪಿ ಅಕ್ಟೋಬರ್ 2: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾಗೆ ಸ್ವಪಕ್ಷಿಯರೇ ಕಾಂಗ್ರೇಸ್ ಕಚೇರಿಯಲ್ಲಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

    ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಎತ್ತಂಗಡಿಗೆ ಸಚಿವೆ ಜಯಮಾಲಾ ಅವರನ್ನು ಕಾಂಗ್ರೇಸ್ ಕಾರ್ಯಕರ್ತರು ಒತ್ತಾಯಿಸಿದರು.ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಯುವ ಕಾಂಗ್ರೇಸ್ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.

    ಭಾರತ್ ಬಂದ್ ವೇಳೆ ನಡೆದ ಗಲಭೆ ಸಂದರ್ಭದಲ್ಲಿ ಸ್ವತಹ ಪೊಲೀಸ್ ವರಿಷ್ಠಾಧಿಕಾರಿ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವೆ ಆಗಿರುವ ಜಯಮಾಲಾ ಲಾಠಿಚಾರ್ಜ್ ಆದಾಗ ಕಾರ್ಯಕರ್ತರ ಕಷ್ಟ ಕೇಳಿಲ್ಲ, ಕಾರ್ಯಕರ್ತರು ಆಸ್ಪತ್ರೆ ಗೆ ದಾಖಲಾದರೂ ಅವರ ಆರೋಗ್ಯ ವಿಚಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಗಣೇಶ್ ಚತುರ್ಥಿ ಸಂದರ್ಭದಲ್ಲಿ ಎಸ್ ಪಿ ಮನೆಗೆ ಊಟ ಮಾಡಲು ಹೋಗಿದ್ದಿರಿ ಎಂದು ಜಯಮಾಲ ವಿರುದ್ದ ಕಾರ್ಯಕರ್ತರು ಆರೋಪಗಳ ಸುರಿಮಳೆಗೈದರು.

    ಈ ನಡುವೆ ಕಾರ್ಯಕರ್ತರ ಆಕ್ರೋಶಕ್ಕೆ ಸಮಜಾಯಿಷಿ ನೀಡಲು ಜಯಮಾಲಾ ಮುಂದಾದರು, ಆದರೆ ಸಚಿವೆಯ ಮಾತಿಗೆ ತಣ್ಣಗಾಗದೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಜಯಮಾಲಾ ಮಾಧ್ಯಮ ಮುಂದಿಟ್ಟುಕೊಂಡು ಹೆದರಿಸಲು ಬರಬೇಡಿ, ನನಗೆ ತುಂಬಾ ಕೋಪ ಬರುತ್ತೆ ಎಂದು ಕಾರು ಹತ್ತಿ ಸಚಿವೆ ಹೊರಟು ಹೊದರು.

    Share Information
    Advertisement
    Click to comment

    You must be logged in to post a comment Login

    Leave a Reply