Connect with us

DAKSHINA KANNADA

ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ದೇಶದ್ರೋಹಿ ಎಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ – ಕಾಂಗ್ರೇಸ್ ಆರೋಪ

ಪುತ್ತೂರು ಎಪ್ರಿಲ್ 2: ದಕ್ಷಿಣಕನ್ನಡ ಲೋಕಸಭೆ ಚುನಾವಣೆಯಲ್ಲಿ ಮಾತಿನಪಟ್ಟು ಜೋರಾಗಿದ್ದು, ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪುತ್ತೂರಿನಲ್ಲಿ ನಡೆದ ಸಭೆಯೊಂದರಲ್ಲಿ ಈ ಚುನಾವಣೆ ದೇಶಪ್ರೇಮಿ ಮತ್ತು ದೇಶದ್ರೋಹಿಗಳ ನಡುವೆ ನಡೆಯುವ ಚುನಾವಣೆ ಎಂದು ಹೇಳುವ ಮೂಲಕ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಪದ್ಮರಾಜ್.ಆರ್.ಪೂಜಾರಿಯವರನ್ನು ದೇಶದ್ರೋಹಿ ಎಂದಿದ್ದಾರೆ ಎಂದು ಕಾಂಗ್ರೇಸ್ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.


ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಿಜೇಶ್ ಚೌಟ ಈ ಹೇಳಿಕೆಯನ್ನು ನೀಡುವ ಮೂಲಕ ಪದ್ಮರಾಜ್.ಆರ್.ಪೂಜಾರಿ ಪ್ರತಿಸ್ಪರ್ಧಿಸುವ ಇಡೀ ಹಿಂದುಳಿದ ವರ್ಗ ಹಾಗು ಪ್ರಮುಖವಾಗಿ ಬಿಲ್ಲವ ಸಮುದಾಯವನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಬಿಜೆಪಿಗೆ ಕೇವಲ ಕೋಮುಗಲಭೆಗಳನ್ನು ಸೃಷ್ಠಿಸಿ ಚುನಾವಣೆಯನ್ನು ಗೆಲ್ಲುವುದು ಮಾತ್ರ ಬೇಕಾಗಿದ್ದು, ಜಿಲ್ಲೆಯ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದು,ಅಷ್ಟು ಕೋಟಿ ಹಣ ಮಾತ್ರ ಎಲ್ಲಿ ವಿನಿಯೋಗವಾಗಿದೆ ಅನ್ನೋದು ಮಾತ್ರ ಕಾಣುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೇಸ್ ಸಂಸದರ ಕೊಡುಗೆ ಸಾಕಷ್ಟಿದ್ದು, ಬಿಜೆಪಿ ಕೊಡುಗೆ ಶೂನ್ಯ ಎಂದು ಅವರು ಆರೋಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *