Connect with us

LATEST NEWS

ಪೋಲೀಸ್ ಮೇಲೆ ಕಾಂಗ್ರೇಸ್ ಮುಖಂಡನ ರೋಪ್,ರಾಜಕೀಯ ಒತ್ತಡಕ್ಕೆ ಆದನೇ ಸೇಫ್

ಪೋಲೀಸ್ ಮೇಲೆ ಕಾಂಗ್ರೇಸ್ ಮುಖಂಡನ ರೋಪ್,ರಾಜಕೀಯ ಒತ್ತಡಕ್ಕೆ ಆದನೇ ಸೇಫ್

ಮಂಗಳೂರು ಜನವರಿ 1: ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಾಂಗ್ರೆಸ್ ಮುಖಂಡನೋರ್ವ ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಬಿಜೈಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸುಮಾರು 11.30ರ ವೇಳೆಗೆ ಬಿಜೈ‌ನಲ್ಲಿ ಉರ್ವ ಠಾಣಾ ಸಿಬ್ಬಂದಿ ಪುಟ್ಟರಾಮ ವಾಹನ ತಪಾಸಣೆ ಮಾಡುತ್ತಿದ್ದು, ಅದೇ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಕದ್ರಿ ಕಾರ್ ನಲ್ಲಿ ಬರುತ್ತಿದ್ದರು..ಅಮೃತ್ ಕದ್ರಿ ಅವರ ಕಾರ್ ನ್ನು‌ ನಿಲ್ಲಿಸಿದ ಪುಟ್ಟರಾಮ ತಪಾಸಣೆಗೆ ಮುಂದಾಗುತ್ತಿದ್ದಂತೆಯೇ ಕಾರ್ ನಿಂದ ಇಳಿದ ಅಮೃತ್ ಪುಟ್ಟರಾಮ‌ ಮೇಲೆ ಹಲ್ಲೆ ನಡೆಸಿದ್ದಾರೆ.

ನೀನ್ಯಾರು ನನ್ನ ವಾಹನ ನಿಲ್ಲಿಸಲು..ನಾನ್ಯಾರು ಗೊತ್ಯಾ ಎಂದು ದಬಾಯಿಸಿದಲ್ಲದೆ ಅವ್ಯಾಚ ಪದಗಳಿಂದ ನಿಂದಿಸಿದ್ದಾರೆ..ಕೊರಳಪಟ್ಟಿಯಲ್ಲಿ ಹಿಡಿದು ಬೆದರಿಕೆ ಹಾಕಿದ್ದಾರೆ.. ನಂತರ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿ ಪರಾರಿಯಾಗಿದ್ದಾರೆ..ಅಮೃತ್ ಕದ್ರಿ ವಿರುದ್ದ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಜಕೀಯ ಪ್ರಭಾವದಿಂದ ಕೇಸ್ ಹಳ್ಳ ಹಿಡಿಯುವ ಸಾಧ್ಯತೆಗಳಿವೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *