Connect with us

DAKSHINA KANNADA

ಅಗಲಿದ ಬಿಜೆಪಿ ಬೀಷ್ಮ ಉರಿಮಜಲು ರಾಮ್ ಭಟ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ವಿದಾಯ….

ಪುತ್ತೂರು ಡಿಸೆಂಬರ್ 07: ಅಗಲಿದ ಪುತ್ತೂರು ಮಾಜಿ ಶಾಸಕ , ಬಿಜೆಪಿಯ ಬೀಷ್ಮ ಉರಿಮಜಲು ರಾಮ್ ಭಟ್ ಗೆ ಸಕಲ ಸರಕಾರಿ ಗೌರವಗಳ ಮೂಲಕ ಅಂತಿಮ ವಿದಾಯ ಸಲ್ಲಿಸಲಾಯಿತು.


ರಾಮ್ ಭಟ್ ಕಟ್ಟಿ ಬೆಳೆಸಿದ ವಿವೇಕಾನಂದ ಕಾಲೇಜು ಆವರಣದಲ್ಲಿ ರಾಮ್ ಭಟ್ ಪಾರ್ಥಿವ ಶರೀರವನ್ನು ಇಟ್ಟು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಂತಿಮ ನಮನ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಯಿತು. ಬಳಿಕ ಪಾರ್ಥಿವ ಶರೀರವನ್ನು ಪುತ್ತೂರಿನ ಟೌನ್ ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು.


ಮಾಜಿ ಮುಖ್ಯಮಂತ್ರಿ ಡಿ‌ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವಸಂತ ಬಂಗೇರ, ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಫಿಲೋಮಿನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋಮ್ಸ್, ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರಕ್ಕೆ ಹಾರ ಹಾಕಿ ಪ್ರಾರ್ಥಿಸಿದ ಜೊತೆಗೆ ನುಡಿ ನಮನವನ್ನೂ ಸಲ್ಲಿಸಿದರು.

ಪುತ್ತೂರಿನ ಮಡಿವಾಳ ಕಟ್ಟೆಯ ಸ್ಮಶಾನದಲ್ಲಿ ಮೃತರ ಅಂತಿಮ ವಿಧಿ ವಿಧಾನವನ್ನು ನೆರವರಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *