Connect with us

    KARNATAKA

    ‘2025 ರ ಅಗಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದು ಖಚಿತ’ ಸಂತೋಷ ಗುರೂಜಿ ಭವಿಷ್ಯ..!

    ಕೋಲಾರ : ಮುಂದಿನ ವರ್ಷ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕಂಟಕವಿದೆ. 2025 ರ ಅಗಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದು ಖಚಿತ ಸಂತೋಷ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಇನ್ನೂ ಒಂದು ವರ್ಷ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಯಾವುದೇ ಕಂಟಕ ಇಲ್ಲ, 2025 ರ ಅಗಸ್ಟ್ ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬಹುದು ಎಂದು ಕೋಲಾರದಲ್ಲಿ ಬಾರ್ಕೂರು ಸಂಸ್ಥಾನ ಮಠದ ಸಂತೋಷ ಗುರೂಜಿ ಹೇಳಿದ್ದಾರೆ. ಮುಂದಿನ ವರ್ಷ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕಂಟಕವಿದೆ. 2025 ರ ಅಗಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದು ಖಚಿತ, ಆದರೆ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕೆ ಏರುವ ಅವಕಾಶ ಕಡಿಮೆ ಇದೆ, ಸಿದ್ದರಾಮಯ್ಯ ಅಲ್ಲದೇ ದೇಶದ ಪ್ರಧಾನಿ ನರೇಂದ್ರ ಮೋದಿ ಕೊಡ ಮುಂದಿನ ವರ್ಷ ಅಗಸ್ಟ್ ನಲ್ಲಿ ಅಧಿಕಾರದಿಂದ ಕೆಳಗೆ ಇಳಿಯಲ್ಲಿದ್ದಾರೆ, ಮೋದಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ. ಮುಡಾ ಹಗರಣ ಸುಮ್ಮನೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದಾರೆ, ಮುಡಾ ಹಗರಣದಲ್ಲಿ ಸಿಎಂ ಅವರದು ಯಾವುದೇ ಪಾತ್ರವಿಲ್ಲ, ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಅವರ ಪರ ಇದ್ದೇವೆ, ಹಿಂದುಳಿದ ವರ್ಗಗಳು ಮಾತ್ರ ಅಲ್ಲ ಎಲ್ಲಾ ಸಮುದಾಯ ಕೊಡ ಸಿಎಂ ಪರ ನಿಲ್ಲಬೇಕು ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply