Connect with us

UDUPI

ಶಿರ್ವ ಧರ್ಮೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಕಾಪು ನವೆಂಬರ್ 14: ಶಿರ್ವ ಧರ್ಮೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭ ಮಕ್ಕಳಿಗೆ ಮಾತೃ ಸಂಗಮ ಅಡಪಾಡಿ ಮತ್ತು ಅಂಗನವಾಡಿ ಶಿಕ್ಷಕಿ ನೀಷ್ಮಾ, ಆಶಾ ಕಾರ್ಯಕರ್ತೆ ಸುಮತಿ ಇವರಿಂದ ಕಲಿಕಾ ಸಾಮಗ್ರಿ ಹಾಗೂ ಮಮತಾ ರಮೇಶ್ ಶೆಟ್ಟಿ ದಂಪತಿಗಳಿಂದ ಕುರ್ಚಿಗಳನ್ನು ಕೊಡುಗೆ ನೀಡಿದರು.


ಟೀನಾ ಐವನ್‌ ಡಿಸೋಜಾ ಅವರು ಗ್ಯಾಸ್‌ ಸ್ಟವ್‌ ಉಡುಗೊರೆಯಾಗಿ ನೀಡಿದರು. ಇತ್ತೀಚಿಗೆ ನಿವೃತ್ತರಾದ ಅಂಗನವಾಡಿ ಶಿಕ್ಷಕಿ ಪುಷ್ಪ ಅವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ಶೇಖರ್‌ ಮತ್ತು ವಿನಯ ದಂಪತಿಗಳ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಇಂದಿರಾ ಪ್ರಕಾಶ್, ವಿನಯ ಶೇಖರ್ ಮತ್ತು ಗ್ರಾಮಸ್ಥರು, ಸೌಮ್ಯ ಗೋಪಾಲ ಮತ್ತು ಸ್ತ್ರೀ ಶಕ್ತಿ ಗಂಪುಗಳಿಂದ ನೆರೆದವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಯಿತು. ಸಂದೀಪ್‌ ಪೂಜಾರಿ, ಸುರೇಶ್‌ ನಾಯಕ್‌, ರವಿಶಂಕರ್‌, ನಳಿನಿ ಪೂಜಾರ್ತಿ ಮತ್ತಿತ್ತರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *