Connect with us

KARNATAKA

ಚಿಕ್ಕಮಗಳೂರು – ಮಹಿಳೆಗೆ ಹೆದರಿಸಲು ಹಾರಿಸಿದ ಗುಂಡು ತಗುಲಿ ಅಮಾಯಕರಿಬ್ಬರ ಬಲಿ

ಚಿಕ್ಕಮಗಳೂರು ಫೆಬ್ರವರಿ 20: ಮಹಿಳೆಯೊಬ್ಬರಿಗೆ ಹೆದರಿಸಲು ಹಾರಿಸಿದ ಗುಂಡು ಬೈಕ್ ನಲ್ಲಿ ಹೋಗುತ್ತಿದ್ದ ಅಮಾಯಕರಿಬ್ಬರಿಗೆ ತಾಗಿ ಇಬ್ಬರೂ ಸಾವನಪ್ಪಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆಯ ಬಳಿ ನಡೆದಿದೆ.


ಬಿದಿರೆಯ ಪ್ರವೀಣ್‌ (24) ಹಾಗೂ ಪ್ರಕಾಶ್‌ (25) ಮೃತಪಟ್ಟವರು. ಗುಂಡು ಹಾರಿಸಿದ ಆರೋಪಿ ರಮೇಶ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಿಬ್ಬರು ಸಂಬಂಧಿಕರು. ಬೆಳಿಗ್ಗೆ 9.45ರ ಹೊತ್ತಿನಲ್ಲಿ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಬಾಳೆಹೊನ್ನೂರು ಠಾಣೆ ಪೊಲೀಸರು ಘಟನಾ ಸ್ಥಳ ಪರಿಶೀಲನೆ ಮಾಡಿದ್ದಾರೆ.

 

‘ಅಂಗನವಾಡಿಗೆ ಮಕ್ಕಳನ್ನು ಕರೆದೊಯ್ಯಲು ಹೋಗುತ್ತಿದ್ದ ಸಹಾಯಕಿಯನ್ನು ರಮೇಶ್‌ ಅಡ್ಡಗಟ್ಟಿದ್ದಾರೆ. ಆ ಮಹಿಳೆಗೆ ಬಂದೂಕು ತೋರಿಸಿ ಕೊಲ್ಲುವುದಾಗಿ ಹೇಳಿದ್ದಾರೆ. ಅವರು ಹಾರಿಸಿದ ಗುಂಡು ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ (ಒಬ್ಬರಿಗೆ ಎದೆ ಭಾಗ, ಮತ್ತೊಬ್ಬರಿಗೆ ಭುಜ) ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಅಷ್ಟರಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *