Connect with us

    KARNATAKA

    ಶಾಸಕರ ಸಂಖ್ಯೆಯ ಆಧಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಂದಿರಬಹುದು – ಕೇಂದ್ರ ಸಚಿವ ಪ್ರಹ್ವಾದ್ ಜೋಷಿ

    ಶಾಸಕರ ಸಂಖ್ಯೆಯ ಆಧಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಂದಿರಬಹುದು – ಕೇಂದ್ರ ಸಚಿವ ಪ್ರಹ್ವಾದ್ ಜೋಷಿ

    ಪುತ್ತೂರು ಸೆಪ್ಟೆಂಬರ್ 30: ರಾಜ್ಯಸರಕಾರದಲ್ಲಿ ನನ್ನದು ತಂತಿ ಮೇಲಿನ ನಡಿಗೆ ಎನ್ನುವ ಸಿ.ಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸಿಎಂ ಯಡಿಯೂರಪ್ಪ ನವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ , ನಮ್ಮ ಬಳಿ ಇದೀಗ ಕೇವಲ ಮೂರು-ನಾಲ್ಕು ಶಾಸಕರು ಮಾತ್ರ ಹೆಚ್ಚಿದ್ದಾರೆ, ಈ ಅರ್ಥದಲ್ಲಿ ಯಡಿಯೂರಪ್ಪನವರು ಹೇಳಿರಬಹುದು ಎಂದರು.

    ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶೀಘ್ರ ನಡೆಯಲಿದ್ದು, ಯಡಿಯೂರಪ್ಪ ನವರು ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದು, ಕೇಂದ್ರದ ನಾಯಕರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ, ಆ ಬಳಿಕವೇ ಈ ಕುರಿತ ಚರ್ಚೆ ನಡೆಯಲಿದೆ ಎಂದರು.

    ಉಪ ಚುನಾವಣೆಗೆ ಪಕ್ಷ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ, ಹದಿನೈದು ಕ್ಷೇತ್ರಗಳಲ್ಲಿ ಸುಮಾರು ಹನ್ನೆರಡರಿಂದ ಹದಿಮೂರು ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳಿದ ಅವರು ಯಡಿಯೂರಪ್ಪ ನವರು ಮೂರೂ ಮುಕ್ಕಾಲು ವರ್ಷ ಯಾವುದೇ ತೊಂದರೆಯಿಲ್ಲದೆ ಅಧಿಕಾರ ನಡೆಸುತ್ತಾರೆ ಎಂದು ವಿಶ್ಚಾಸ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply