KARNATAKA
ಮಂಗಳೂರು ತಲುಪಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮರಥ
ಮಂಗಳೂರು ತಲುಪಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮರಥ
ಮಂಗಳೂರು ಅಕ್ಟೋಬರ್ 1: ನಿನ್ನೆ ಉಡುಪಿಯ ಕೋಟೇಶ್ವರದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ಬ್ರಹ್ಮರಥದ ಇಂದು ಮಂಗಳೂರು ತಲುಪಿದೆ. ಸಾವಿರಾರು ಭಕ್ತರು ರಥದ ಪೂಜೆ ಮಾಡಿ ಬ್ರಹ್ಮರಥವನ್ನು ಸ್ವಾಗತ ಮಾಡಿದರು. ಇಂದು ಬ್ರಹ್ಮರಥ ಹೊತ್ತ ಟ್ರಕ್ ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿ ಬೆಳೆಸಿದೆ.
ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಕಡಬ ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬ್ರಹ್ಮ ರಥವನ್ನು ಕುಕ್ಕೆಗೆ ದಾನವಾಗಿ ನೀಡಲಿದ್ದು, ನಾಳೆ ಸುಬ್ರಹ್ಮಣ್ಯ ದ ಪುರ ಪ್ರವೇಶ ಮಾಡಲಿದೆ..ರಾಷ್ಟ್ರ ಪ್ರಶಸ್ತಿ ವಿಜೇತ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಈ ಬ್ರಹ್ಮರಥವನ್ನು ನಿರ್ಮಾಣ ಮಾಡಿದ್ದು,400 ವರ್ಷಗಳ ಹಿಂದಿನ ಹಳೆಯ ಬ್ರಹ್ಮರಥದ ರೀತಿಯೇ ಕಿಂಚಿತ್ತೂ ವ್ಯತ್ಯಾಸ ವಾಗದಂತೆ ಮಾಡಲಾಗಿದೆ. ನಾಳೆ ಸಂಜೆ ವೇಳೆಗೆ ಬ್ರಹ್ಮ ರಥ ಸುಬ್ರಹ್ಮಣ್ಯ ವನ್ನು ತಲುಪಲಿದ್ದು,ಭವ್ಯ ಮೆರವಣಿಗೆ ಮೂಲಕ ರಥವನ್ನು ಸ್ವಾಗತ ಮಾಡಲಾಗುತ್ತದೆ.
You must be logged in to post a comment Login