Connect with us

    LATEST NEWS

    ಕಣ್ಣೂರು ಎಡ್ಯಾರ್ ನಲ್ಲಿ ಮೋರಿಗೆ ಕಾರು ಡಿಕ್ಕಿ – ಯುವಕ ಮೃತ್ಯು..!

    ಕಣ್ಣೂರು ಎಡ್ಯಾರ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ. ಕಣ್ಣೂರು ನ 17ನೇ ಮೈಲಿನಲ್ಲಿ ಈ ಕಾರು ಅಪಘಾತ ಸಂಭವಿಸಿದೆ.

    ಕಣ್ಣೂರು : ಕಣ್ಣೂರು ಎಡ್ಯಾರ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ. ಕಣ್ಣೂರು ನ 17ನೇ ಮೈಲಿನಲ್ಲಿ ಈ ಕಾರು ಅಪಘಾತ ಸಂಭವಿಸಿದೆ.

    ನಿನ್ನೆ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು ಪುಜಿಯೋಟ್ ಮೂಲದ ಯುವಕ ಸಹಲ್ (22) ಮೃತ ದುರ್ದೈವಿಯಾಗಿದ್ದಾನೆ.

    ಕಾರು ನೆಡುಪೊಯಿ ಕಡೆಯಿಂದ ಕೂತುಪರಂ ಕಡೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

    ರಕ್ಷಣಾ ತಂಡಗಳು ಸ್ಥಳೀಯರ ನೆರವಿನೊಂದಿಗೆ ಸಾಕಷ್ಟು ಶ್ರಮಿಸಿದ ನಂತರ ಸಹಲ್ ನನ್ನು ಹೊರ ತೆಗೆಯಲು ಸಾಧ್ಯವಾಯಿತು.

    ಕೂಡಲೇ ಸಹಲ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply